ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ದುರಂತದ ಬಸ್ ಗೆ ಒಂಬತ್ತನೇ ಮಾಲೀಕರು ಶ್ರೀನಿವಾಸ್

|
Google Oneindia Kannada News

ಮಂಗಳೂರು, ನವೆಂಬರ್ 24 : ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಘೋರ ದುರಂತಕ್ಕೆ ಸಾಕ್ಷಿಯಾದ 'ರಾಜ್ ಕುಮಾರ್' ಬಸ್ ಮಂಗಳೂರಿನ ನೋಂದಣಿಯಲ್ಲೇ ಇದೆ. ಬಸ್ ನ ಮಾಲೀಕರು ಶ್ರೀನಿವಾಸ್. ನಂಬರ್ ಕೆ.ಎ 19- ಎ 5676. 2001ರಲ್ಲಿ ಈ ವಾಹನ ನೋಂದಣಿ ಆಗಿದೆ.

ದುರಂತಕ್ಕೆ ಕಾರಣವಾಗಿರುವ ಈ ರಾಜ್ ಕುಮಾರ್ ಹೆಸರಿನ ಬಸ್ ಮಂಗಳೂರು ಮೂಲದ್ದು. ಮಂಗಳೂರು - ಬಜಪೆ ಮಧ್ಯೆ ಸರ್ವೀಸ್ ಬಸ್ ಆಗಿ ಸಂಚರಿಸುತ್ತಿತ್ತು. ನಂತರ ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚರಿಸುತ್ತಿತ್ತು. ಮೂರು ವರ್ಷದ ಹಿಂದೆ ಮಂಗಳೂರಿನಿಂದ ಬಸ್ ಮಾರಾಟ ಮಾಡಲಾಗಿತ್ತು. 15ನೇ ಮೇ 2019ಕ್ಕೆ ಬಸ್ ಆಯಸ್ಸು ಮುಗಿಯುವುದರಲ್ಲಿತ್ತು. ಆದರೆ ಈ ನಡುವೆ ಘೋರ ದುರಂತಕ್ಕೆ ಕಾರಣವಾಗಿದೆ.

ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ಕೆಎ 19, ಎ 5676 ಮಂಗಳೂರು ನೋಂದಣಿಯಲ್ಲಿಯೇ ಮುಂದುವರಿದಿದ್ದ ಬಸ್ ಇದಾಗಿದ್ದು, ರಾಜ್ ಕುಮಾರ್ ಹೆಸರಲ್ಲಿ ಮಂಗಳೂರಿನಲ್ಲಿ ಖಾಸಗಿ ಸರ್ವೀಸ್ ಬಸ್ ಆಗಿ, ಕೆಲವು ವರ್ಷಗಳಿಂದ ಸಂಚರಿಸುತ್ತಿತ್ತು. ರಾಜ್ ಕುಮಾರ್ ಹೆಸರಿನ ಈ ಬಸ್ ಈ ವರೆಗೆ ಎಂಟು ಮಾಲೀಕರ ಕೈ ಬದಲಾಗಿ, ಮಂಡ್ಯದ ಶ್ರೀನಿವಾಸ್ ಎಂಬುವವರಿಗೆ 2015ರ ಏಪ್ರಿಲ್‌ 1ರಂದು ಮಾರಾಟವಾಗಿತ್ತು.

Mandya Bus Tragedy

ಶಾಂಭವಿ ಗುಜರಾನ್ ಎಂಬವರ ಹೆಸರಲ್ಲಿದ್ದ ರಾಜ್ ಕುಮಾರ್ ಬಸ್ ನ ಈ ಹಿಂದಿನ ವಿಳಾಸ ಶಾಂಭವಿ ಗುಜರಾನ್ , w/o ರಾಘವ ಕರ್ಕೇರಾ, 7-12-183, ಸುಲ್ತಾನ್ ಬತ್ತೇರಿ ರಸ್ತೆ, ಬೋಳೂರು, ಮಂಗಳೂರು ಆಗಿದೆ. ಜೂನ್ 01, 2001ರಲ್ಲಿ ಶಂಕರ ವಿಠಲ ಕಂಪೆನಿ ಹೆಸರಲ್ಲಿ ಮೊದಲ ನೋಂದಣಿ ಆಗಿದ್ದ ಈ ಬಸ್ ಆ ಬಳಿಕ ಮಂಗಳೂರಿನಲ್ಲೇ ಎಂಟು ಮಾಲೀಕರನ್ನು ಕಂಡಿತ್ತು.

ಮಂಡ್ಯ ಬಸ್‌ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆಮಂಡ್ಯ ಬಸ್‌ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆ

ಕೊನೆಯದಾಗಿ ರೂಟ್ ನಂಬರ್ 16, ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚಾರ ನಡೆಸಿದ್ದ ಬಸ್ ಗೆ 15 ವರ್ಷ ಮೇಲ್ಪಟ್ಟ ಕಾರಣ ಮತ್ತೆ ಪರ್ಮಿಟ್ ನೀಡದ ಮಂಗಳೂರು ಆರ್ಟಿ ಓ ಕ್ಲಿಯರೆನ್ಸ್ ಸರ್ಟಿಫಿಕೇಟ್ ‌ನೀಡಿತ್ತು.

English summary
Srinivas is the 9th owner for Kanagana Maradai, Mandya tragedy bus. Bus fell in to the VC Channel on Saturday. More than 25 people died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X