ಮಂಗಳೂರು-ದೆಹಲಿ ನಡುವೆ ಆಗಸ್ಟ್ 4ರಿಂದ ನೇರ ವಿಮಾನ ಸೇವೆ
ಮಂಗಳೂರು, ಜುಲೈ 20: ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ನವದೆಹಲಿ ನೇರ ವಿಮಾನ ಸೇವೆಗೆ ಮರುಜೀವ ಸಿಕ್ಕಿದೆ. ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಂಗಳೂರಿನಿಂದ ನವದೆಹಲಿಗೆ ಇದೇ ಆಗಸ್ಟ್ 4ರಿಂದ ನೇರ ವಿಮಾನ ಸೇವೆ ಆರಂಭಿಸಲಿದೆ.
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಜಾರಿದ ವಿಮಾನ
ಈ ಹಿಂದೆ ರಾಜಧಾನಿ ನವದೆಹಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್ವೇಸ್ ಸಂಚರಿಸುತ್ತಿತ್ತು. ಕೆಲವು ತಿಂಗಳಿನಿಂದ ಆ ವಿಮಾನ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನವೇ ಇರಲಿಲ್ಲ.
ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 4ರಿಂದ ಪ್ರತಿ ದಿನ ಬೆಳಗ್ಗೆ 6:15ಕ್ಕೆ ಮಂಗಳೂರಿನಿಂದ ಹೊರಡುವ ಈ ವಿಮಾನ ಬೆಳಗ್ಗೆ 8:55ಕ್ಕೆ ನವದೆಹಲಿ ತಲುಪಲಿದೆ. ಪ್ರತಿ ದಿನ ರಾತ್ರಿ 8:30ಕ್ಕೆ ದೆಹಲಿಯಿಂದ ಹೊರಡುವ ವಿಮಾನ ರಾತ್ರಿ 11:15ಕ್ಕೆ ಮಂಗಳೂರು ತಲುಪಲಿದೆ. ದೆಹಲಿಗೆ ನೇರ ವಿಮಾನ ಸೇವೆ ಮರು ಆರಂಭಿಸುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ್ದರು.