ಮಂಗಳೂರು: 'ಶಬರಿಮಲೆ ಸತ್ಯಾನ್ವೇಷಣೆ' ವಿಚಾರ-ವಿಮರ್ಶೆ
ಮಂಗಳೂರು, ಆಗಸ್ಟ್ 07: ಇತ್ತೀಚೆಗೆ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದ್ದ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದ ಬಗ್ಗೆ ಮಂಗಳೂರಲ್ಲೊಂದು ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ.
'ಶಬರಿಮಲೆ ಸತ್ಯಾನ್ವೇಶಣೆ' ಹೆಸರಿನ ಈ ಗೋಷ್ಠಿಯಲ್ಲಿ ಪ್ರಖ್ಯಾತ ಲೇಖಕ ರಾಹುಲ್ ಈಶ್ವರ್ ಅವರು ಶಬರಿಮಲೆ ಸುತ್ತಲಿನ ವಿವಾದದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಶಬರಿಮಲೆ ದೇವಸ್ಥಾನ: ಮಹಿಳೆಯರಿಗೆ ಪ್ರವೇಶ ನೀಡಲು ಕೇರಳ ಸರ್ಕಾರ ಒಲವು
ಕಾರ್ಯಕ್ರಮವನ್ನು ಸಿಟಿಜನ್ ಕೌನ್ಸಿಲ್ ಮಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವು ಆಗಸ್ಟ್ 11 ರ ಶನಿವಾರ ಸಂಜೆ 6 ಗಂಟೆಗೆ ಸಂಘಿಕೇತನದಲ್ಲಿ ನಡೆಯಲಿದೆ.
ಶಬರಿಮಲೆಯ ಇತಿಹಾಸ, ಮಹಿಳೆಯರ ಪ್ರವೇಶ ನಿರ್ಭಂಧದ ಹಿಂದಿನ ಕಾರಣ, ಕಾನೂನು ಹೊರಾಟ, ಮುಂದಿನ ನಡೆಗಳು ಎಲ್ಲದರ ಬಗ್ಗೆಯೂ ಗೋಷ್ಠಿಯಲ್ಲಿ ಚರ್ಚೆ ಆಗಲಿದೆ.
Comments
English summary
Speech by writer Rahul eshwar Shabarimale's truth in Mangaluru. program organizing by citizen's council Mangaluru at Sanganikethan on August 11 evening 6.
Story first published: Tuesday, August 7, 2018, 16:08 [IST]