ಹಿರಿಯ ನಾಗರಿಕರ ಮತದಾನಕ್ಕೆ ದಕ್ಷಿಣ ಕನ್ನಡದಲ್ಲಿ 'ಸೀನಿಯರ್ ಸಿಟಿಜನ್ ಫ್ರೆಂಡ್ಲಿ ಬೂತ್'
ಮಂಗಳೂರು ಮಾರ್ಚ್ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯು ಅತ್ಯಧಿಕ ಶೇಕಡ ಮತದಾನವಾಗ ವಾಗಬೇಕೆಂದು ಜಿಲ್ಲಾಡಳಿತ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರಿಗೆ ಮತದಾನದ ಮಹತ್ವ ಸಾರುಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಸ್ವೀಪ್ ಸಮಿತಿ ಸಜ್ಜಾಗಿದೆ.
ದಕ್ಷಿಣ ಕನ್ನಡದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಹೆಚ್ಚಳ
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ ಇ ಓ ಸೆಲ್ವಮಣಿ ಮಾಹಿತ ನೀಡದ್ದು ಈ ಬಾರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸ್ವೀಪ್ ಸಮಿತಿ ವತಿಯಿಂದ ಗಾಳಿಪಟ ಉತ್ಸವ, ಮರಳು ಶಿಲ್ಪ , ಹದಿನೆಂಟು ಕಿಲೋಮೀಟರ್ ನ ವಾಕಥನ್, ಸೈಕ್ಲೋಥಾನ್ ನಡೆಸಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡದಲ್ಲಿ ಹೆಚ್ಚು ಮತದಾರರು ಸೇರ್ಪಡೆ:ಜಿಲ್ಲಾಧಿಕಾರಿ
ನಗರದ ಮಾಲ್ ಗಳಲ್ಲಿ ಡೆಮೋ ಮತಚಲಾವಣೆ ಮಾಡಿಸುವ ಯೋಜನೆಯಿದ್ದು ಈಗಾಗಲೆ ಜಿಲ್ಲೆಯ ವಿವಿಧೆಡೆ ಎರಡು ಲಕ್ಷ ಮಂದಿಗೆ ಮತದಾನ ಚಲಾವಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ತಿಳಿಸಿದರು. ಈ ಬಾರಿ ಪಿಂಕ್ ಬೂತ್, ಎತ್ನಿಕ್ ಬೂತ್, ಟ್ರೈಬಲ್ ಪ್ರೆಂಡ್ ಬೂತ್ ಜೊತೆಗೆ ಸೀನಿಯರ್ ಸಿಟಿಜನ್ ಪ್ರೆಂಡ್ಲಿ ಬೂತ್ ತೆರೆಯಲು ಯೋಜನೆ ಸಿದ್ದ ಪಡಿಸಲಾಗಿದೆ ಎಂದು ತಿಳಿಸಿದರು.