ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಮಂಗಳೂರು, ಜುಲೈ 20: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಯ ತಪ್ಪಿ ಜಾರಿ ಬಿದ್ದು ಆಸ್ಕರ್ ಫರ್ನಾಂಡೀಸ್ ತಲೆಗೆ ಏಟಾಗಿದೆ.
ಸದ್ಯ ಐಸಿಯುನಲ್ಲಿ ಆಸ್ಕರ್ ಫರ್ನಾಂಡೀಸ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಸ್ಕರ್ ಫರ್ನಾಂಡೀಸ್ ಜಾರಿ ಬಿದ್ದಿದ್ದರು. ಆದರೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲವೆಂದು ನಿರ್ಲಕ್ಷ್ಯ ವಹಿಸಿದ್ದರು.
ಆದರೆ, ಮಾಮೂಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ವೇಳೆ ತಲೆಯ ಒಳಭಾಗಕ್ಕೆ ಏಟು ಬಿದ್ದಿರುವುದು ಬೆಳಕಿಗೆ ಬಂದಿದ್ದು, ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿಂದೆಯೂ ಆಸ್ಕರ್ ಫರ್ನಾಂಡೀಸ್ ಮಾರಕ ಖಾಯಿಲೆಗೆ ತುತ್ತಾಗಿದ್ದು, ಆಯುರ್ವೇದ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡಿದ್ದರು.
ಗೋಮೂತ್ರದಿಂದ
ಕ್ಯಾನ್ಸರ್
ಗುಣವಾದ
ಬಗ್ಗೆ
ಆಸ್ಕರ್
ಮಾತು
ಕಾಂಗ್ರೆಸ್ನ
ಹಿರಿಯ
ಮುಖಂಡ
ಆಸ್ಕರ್
ಫರ್ನಾಂಡಿಸ್
ವ್ಯಕ್ತಿಯೊಬ್ಬರು
ಗೋಮೂತ್ರದಿಂದ
ಕ್ಯಾನ್ಸರ್
ಗುಣಪಡಿಸಿಕೊಂಡಿರುವ
ಕಥೆಯನ್ನು
ರಾಜ್ಯಸಭೆಯಲ್ಲಿ
ಹೇಳಿಕೊಂಡಿದ್ದರು.
ಅಷ್ಟೇ
ಅಲ್ಲದೆ
ಗೋ
ಮೂತ್ರದಿಂದಾಗುವ
ಉಪಯೋಗದ
ಬಗ್ಗೆಯೂ
ಅವರು
ಮಾತನಾಡಿದ್ದರು.
ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಗಳಿಗೆ ರಾಷ್ಟ್ರೀಯ ಆಯೋಗಗಳನ್ನು ಸ್ಥಾಪಿಸುವ ಎರಡು ಮಸೂದೆಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ್ದ ಮಾಜಿ ಕೇಂದ್ರ ಸಚಿವ, ಒಮ್ಮೆ ಮೀರತ್ ಬಳಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಗೋಮೂತ್ರ ಕುಡಿದು ಕ್ಯಾನ್ಸರ್ ಗುಣಪಡಿಸಿಕೊಂಡಿದ್ದಾಗಿ ವ್ಯಕ್ತಿಯೊಬ್ಬರು ತಮ್ಮದೊಂದಿಗೆ ಹೇಳಿಕೊಂಡಿದ್ದಾಗಿ ಫರ್ನಾಂಡಿಸ್ ತಿಳಿಸಿದ್ದರು.
"ಮೊಣಕಾಲಿನ ತೀವ್ರ ನೋವು ಬಂದಾಗ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ನೀಡಿದ ಸಲಹೆಗಳನ್ನು ನಿರಾಕರಿಸಿ, 'ವಜ್ರಾಸನ' ಮಾಡಲು ಪ್ರಾರಂಭಿಸಿದ್ದೆ. ಯೋಗ, ವಜ್ರಾಸನ ಮಾಡಲು ಆರಂಭಿಸಿದ್ದು, ಸದ್ಯ ಯಾವುದೇ ತೊಂದರೆ ಇಲ್ಲದೆ ಕುಸ್ತಿ ಮಾಡುವಷ್ಟು ಸಮರ್ಥನಾಗಿದ್ದೇನೆ,'' ಎಂದಿದ್ದನ್ನು ಸ್ಮರಿಸಬಹುದು.