ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಮಂಗಳೂರು, ಆಗಸ್ಟ್ 22: ಕಂದಾಯ ನಿರೀಕ್ಷ ಕರೊಬ್ಬರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ .
94C ಅಡಿಯಲ್ಲಿ ಜಾಗದ ಹಕ್ಕು ಪತ್ರ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ದಯಾನಂದ ಭ್ರಷ್ಚಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಸುಳ್ಯ ತಾಲೂಕಿನ ಪಂಜ ನಾಡಕಛೇರಿಯ ರೆವೆನ್ಯೂ ಇನ್ಸ್ ಪೆಕ್ಟರ್ ದಯಾನಂದ್ , ಹರೀಶ್ ಎಂಬವರಿಗೆ 9 ಸೆಂಟ್ಸ್ ಜಾಗವನ್ನು 94Cಮಂಜೂರು ಮಾಡುವುದಕ್ಕಾಗಿ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಲಂಚದ ವಿಚಾರವನ್ನು ಹರೀಶ್ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಹರೀಶ್ ಇಂದು ಹಣ ನೀಡುವುದಾಗಿ ದಯಾನಂದ್ ಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ನಾಡಾ ಕಚೇರಿಯಲ್ಲಿ ದಯಾನಂದ್ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಹೆಡ್ ಹ್ಯಾಡ್ ಆಗಿ ಬಂಧಿಸಿದ್ದಾರೆ.
Comments
English summary
Sullia Revenue officer was caught red hand by the Anti Corruption Bureau (ACB) here on Aug 21. The arrested is identified as Dayanand.
Story first published: Tuesday, August 22, 2017, 8:19 [IST]