ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಮೇ 24 ರಂದು ರಮ್ಜಾನ್ ಆಚರಣೆ?
ಮಂಗಳೂರು, ಮೇ 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೇ 24ರ ರವಿವಾರದಂದು ಈದ್ ಉಲ್ ಫಿತರ್ ರಮ್ಜಾನ್ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಝರಿ ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮೇ 23 ರ ಶನಿವಾರದಂದು ಮುಸ್ಲಿಂ ಬಾಂಧವರು 30 ನೇ ಉಪವಾಸ ಪೂರ್ಣಗೊಳಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 24 ರ ರವಿವಾರದಂದೇ ಈದ್ ಉಲ್ ಫಿತರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಝರಿ ಉಸ್ತಾದ್ ಕರೆ ನೀಡಿದ್ದಾರೆ.
ಮಂಗಳೂರು ವಿಮಾನ ದುರಂತದ ಕಹಿ ನೆನಪಿಗೆ 10 ವರ್ಷ
ಈ ಬಗ್ಗೆ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
ramzan celebration muslim festivals kannada news dakshina kannada mangaluru ಆಚರಣೆ ಕನ್ನಡ ಸುದ್ದಿ ದಕ್ಷಿಣ ಕನ್ನಡ ಮಂಗಳೂರು
English summary
Dakshina Kannada District Khazi Shaikhuna Al-Haj Twaqa Ahmad Al-Azzari has decided to celebrate Eid-ul-Fitr Ramzan on May 24 in Dakshina Kannada district.
Story first published: Friday, May 22, 2020, 21:14 [IST]