ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಸರ್ಪ ಸಂಸ್ಕಾರ ಪೂಜೆ ವಿರುದ್ಧ ಸುಬ್ರಹ್ಮಣ್ಯದಲ್ಲಿ ಜನಜಾಗೃತಿ ಸಭೆ

|
Google Oneindia Kannada News

ಮಂಗಳೂರು, ಆಗಸ್ಟ್ 27: ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲವರು ನಡೆಸುತ್ತಿರುವ ಅಕ್ರಮ ಸರ್ಪ ಸಂಸ್ಕಾರ ಪೂಜೆ ವಿರುದ್ಧ ಹೋರಾಟ ಆರಂಭವಾಗಿದೆ. ಸಂಪುಟ ನರಸಿಂಹ ಮಠದಲ್ಲಿ ನಡೆಯುತ್ತಿರುವ ಅಕ್ರಮ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ ಹಾಗೂ ಇತರ ಸೇವೆಗಳನ್ನು ವಿರೋಧಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಭಕ್ತ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯದಲ್ಲಿ ಜನಜಾಗೃತಿ ಸಭೆ ನಡೆಸಿದೆ.

protest against Samputa Narasimha math of Subrhamnya

ಸಂಪುಟ ನರಸಿಂಹ ಸ್ವಾಮಿ ಎಂದಿದ್ದ ಮಠದ ಹೆಸರನ್ನು ಮಠದ ಸ್ವಾಮೀಜಿ ಸುಬ್ರಹ್ಮಣ್ಯ ಮಠ ದಎಂದು ಹೆಸರು ಬದಲಾಯಿಸಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಧರ್ಮದ ಬಗ್ಗೆ, ಧರ್ಮದ ಜಾಗೃತಿಯ ಬಗ್ಗೆ ಗಮನ ಹರಿಸಬೇಕಾದ ಮಠದ ಸ್ವಾಮೀಜಿ ಕೇವಲ ಹಣ ಮಾಡುವುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರುಪಯೋಗ ಪಡಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸಭೆಯಲ್ಲಿ ಸೇರಿದ ಮುಖಂಡರು ಆಗ್ರಹಿಸಿದ್ದಾರೆ.

protest against Samputa Narasimha math of Subrhamnya

ನಾಗದೋಷ ಪರಿಹಾರಕ್ಕೆ ಸೂಕ್ತ ಸ್ಥಳ ಸ್ವಯಂ ಭೂ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಾಗಿದ್ದು, ಉಳಿದ ಯಾವ ಕಡೆ ಸರ್ಪ ಸಂಸ್ಕಾರ ಪೂಜೆ ಮಾಡುದರೂ ದೋಷ ಪರಿಹಾತ ಸಾಧ್ಯವಿಲ್ಲ ಎನ್ನುವ ವಿಚಾರವನ್ನೂ ನೆರೆದಿದ್ದ ಭಕ್ತಾಧಿಗಳಿಗೆ ತಿಳಿಸುವ ಪ್ರಯತ್ನವೂ ಜಾಗೃತಿ ಸಭೆ ಮೂಲಕ ನಡೆಸಲಾಯಿತು .

English summary
Subrahmanya Bhakthara Hitharakashana Vedike staged protest against Samputa Narasimha Math of Kukke Subrhamanya .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X