ದಕ್ಷಿಣ ಕನ್ನಡ ಜಿಲ್ಲೆ ದೇಗುಲಗಳಿಗೆ ರವಿಶಾಸ್ತ್ರಿ ಭೇಟಿ
ಕಾರ್ಕಳ, ಫೆ.11: ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ದೇಗುಲಗಳಿಗೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕಳೆದ ಸುಮಾರು ಆರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೊಮ್ಮೆಯಾದರೂ ಕನ್ನಡ ಜಿಲ್ಲೆಗಳ ದೇಗುಲಗಳಿಗೆ ಭೇಟಿ ನೀಡುವುದನ್ನು ರವಿಶಾಸ್ತ್ರಿ ರೂಢಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಗ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗ ಪ್ರತಿಷ್ಠಾಪನೆ ನೆರವೇರಿಸಲಾಗುತ್ತ್ತದೆ. ಈ ರೀತಿ ಪೂಜೆಯನ್ನು ನೇಮ ನಿಷ್ಠೆಯಿಂದ ಮಾಡಿದರೆ ಸಕಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಕನ್ನಡ ಜಿಲ್ಲೆಯಿಂದ ಮುಂಬೈಗೆ ವಲಸೆ ಹೋಗಿ ನೆಲೆಸಿದ ಶಾಸ್ತ್ರಿ ಅವರ ಕುಟುಂಬ ಕೂಡಾ ಈ ರೀತಿ ನಂಬಿಕೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ.
ನಾಗಬನದಲ್ಲಿ ರವಿಶಾಸ್ತ್ರಿ ದಂಪತಿ ಪೂಜೆಗೈದ ಪರಿಣಾಮ 18 ವರ್ಷಗಳ ನಂತರ ಅವರ ಮನೆಯಲ್ಲಿ ಮಗು ಅಳುವ ಸದ್ದು ಕೇಳಿಸಿತ್ತು. ಇದರಿಂದ ಪ್ರಭಾವಿತರಾದ ಶಾಸ್ತ್ರಿ ಅವರು ಸಮಯ ಸಿಕ್ಕಾಗಲೆಲ್ಲಾ ಕಾರ್ಕಳ ವಿಷ್ಣುಮೂರ್ತಿ ದೇಗುಲ, ಕುಕ್ಕೆ ಸುಬ್ರಮಣ್ಯ ದೇಗುಲ, ಕನ್ನಡ ಜಿಲ್ಲೆಯ ಅನೇಕ ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಿಗೆ ಭೇಟಿ ನೀಡಿದ ರವಿಶಾಸ್ತ್ರಿ ಅವರ ಚಿತ್ರಗಳು ಮುಂದಿದೆ. ಚಿತ್ರ ಸರಣಿಯಲ್ಲಿರುವುದು ಕರ್ನಾಟಕದ ದೇಗುಲ ಭೇಟಿ ಸಂದರ್ಭದಲ್ಲಿ ತೆಗೆದ ಚಿತ್ರಗಳು... ತಪ್ಪದೇ ನೋಡಿ...ಚಿತ್ರಕೃಪೆ: ಪ್ರವೀಣ್ ಸ್ಟುಡಿಯೋ, ಶ್ರೀನಿಧಿ ಕಾರ್ವಲ್
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿದ್ದ ರವಿಶಾಸ್ತ್ರಿ ಶೇಷಸೇವೆ ಹಾಗೂ ಆಶ್ಲೇಷ ಬಲಿ ಹರಕೆ ಸೇವೆ ಸಲ್ಲಿಸಿ, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ರವಿಶಾಸ್ತ್ರಿ ಅವರಿಗೆ ಶಾಲು ಹೊದಿಸಿ ಗೌರವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರವಿಶಾಸ್ತ್ರಿ ಅವರಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಗಂಧ, ಮಹಾಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು.
ಸುಬಹ್ಮಣ್ಯ ಮಠಕ್ಕೂ ಭೇಟಿ ನೀಡಿದ ಶಾಸ್ತ್ರಿ
ಕುಕ್ಕೆ ಸುಬ್ರಮಣ್ಯ ದೇಗುಲ ಭೇಟಿ ನಂತರ ಸಂಪುಟ ನರಸಿಂಹಸ್ವಾಮಿ ಸುಬಹ್ಮಣ್ಯ ಮಠಕ್ಕೂ ಭೇಟಿ ನೀಡಿದರು
ಎಲ್ಲೆಡೆ ರವಿಶಾಸ್ತ್ರಿ ಅವರಿಗೆ ಆಶೀರ್ವಾದ
ಕಾರ್ಕಳದ ದೇಗುಲದ ನಂತರ ಕುಕ್ಕೆ ಸುಬ್ರಮಣ್ಯದಲ್ಲಿ ಶ್ರೀ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶಾಲು ಹೊದಿಸಿ, ಫಲಮಂತ್ರಾಕ್ಷತೆ ನೀಡಿ ಹರಸಿದರು.
ರವಿಶಾಸ್ತ್ರಿ ಅವರಿಗೆ ಗಣ್ಯರ ಸಾಥ್
ಪತ್ರಕರ್ತ ಮನೋಹರ್ ಪ್ರಸಾದ್, ಚಂದ್ರಶೇಖರ್ ಹೆಗ್ಡೆ, ನವೀನ್ ಕುಮಾರ್, ಹರಿಶ್ಚಂದ್ರ ರಾವ್, ಜೀವನಾದ ಶೆಟ್ಟಿ,ಅಶೋಕ್ ಕಾರಂತ ಮುಂತಾದವರು ರವಿಶಾಸ್ತ್ರಿ ಅವರ ದೇಗುಲ ಭೇಟಿ ಸಂದರ್ಭದಲ್ಲಿ ಜತೆಗಿದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]