ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಾಗುವ ಛಾಯಾಗ್ರಾಹಕ ಸ್ಮಶಾನ ಸೇರಿದ

By ಐಸಾಕ್ ರಿಚರ್ಡ್
|
Google Oneindia Kannada News

ಮೂಡುಬಿದಿರೆ, ಅಕ್ಟೋಬರ್, 16 : ನಗರದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಬಳಿ ಕಾರಿಗೆ ಬಸ್ಸು ಢಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಛಾಯಾಗ್ರಾಕನೊಬ್ಬ ಸಾವನ್ನಪ್ಪಿದ ಘಟನೆ ಅಕ್ಟೋಬರ್ 14ರ ಬುಧವಾರ ಸಂಜೆ ನಡೆದಿದೆ.

ಶಿರ್ತಾಡಿ ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಿವಾಸಿ ಶ್ರೀಧರ ಆಚಾರ್ಯ ಅವರ ತೃತೀಯ ಪುತ್ರ ಹರೀಶ್ ಆಚಾರ್ಯ(29) ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾನೆ. ಹರೀಶ್ ಮೂಡುಬಿದಿರೆಯಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದು, ಅ.25ರ ಭಾನುವಾರದಂದು ಶ್ರೀ ಮಹಾವೀರ ಭವನದಲ್ಲಿ ಮದುವೆ ನಿಗಧಿಯಾಗಿತ್ತು.[ಬೆಂಗಳೂರು: ಟ್ಯಾಂಕರ್ ಹರಿದು ಸೆಂಟ್ ಕ್ಯಾಥರಿನ್ ಶಾಲೆ ಶಿಕ್ಷಕಿ ಸಾವು]

Photographer was death in accident, Near by Alvas college, Moodbidri , Mangaluru,

ಹರೀಶ್ ಅವರು ಕಾರಿನಲ್ಲಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಬಳಿ ಬರುತ್ತಿದ್ದಾಗ ಕಾರಿಗೆ ಬಸ್ಸು ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಟೆನ್‍ವೀಲರ್ ಕಾರಿನ ಎದುರು ಭಾಗಕ್ಕೆ ಢಿಕ್ಕಿಯಾಗಿದ್ದು, ಹರೀಶ್ ತೀವ್ರವಾಗಿ ಗಾಯಗೊಂಡಿದ್ದರು.

ಗಂಭೀರವಾಗಿ ಗಾಯಗೊಂಡ ಹರೀಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Photographer was death in accident, Near by Alvas college, Moodbidri, Mangaluru, on Wednesday, October 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X