ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆ ದಿನದಂದೇ ವಧು ಸಾವು ಎಂಬ ಸುದ್ದಿ: ಒಂದು ಸ್ಪಷ್ಟೀಕರಣ

ಮಂಗಳೂರಿನ ವಾಟ್ಸಪ್ ಸುದ್ದಿ ಕುರಿತಂತೆ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಲೇಖನದಲ್ಲಿ ತಪ್ಪಾಗಿ ಬೇರೆಯೊಬ್ಬರ ಚಿತ್ರ ಕಾಣಿಸಿಕೊಂಡಿದ್ದು, ಈ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸುತ್ತೇವೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 30 : 'ಮಂಗಳೂರಿನ ಉಳ್ಳಾಲ ಅಲೇಕಳ ಎಂಬ ಊರಿನ ಯುವಕನ ಮದುವೆ ರದ್ದಾಗಿದೆ. ಎಲ್ಲರೂ ಸಹಕರಿಸಿ' ಎಂಬ ಸುದ್ದಿ ರವಿವಾರ ಬೆಳಗ್ಗೆಯಿಂದ ವಾಟ್ಸಾಪ್ ನಲ್ಲಿ ಮಾಹಿತಿಯೊಂದನ್ನ ಹರಿಯಬಿಡಲಾಗಿತ್ತು.

ಈ ಬಗ್ಗೆ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಲೇಖನದಲ್ಲಿ ತಪ್ಪಾಗಿ ಬೇರೆಯೊಬ್ಬರ ಚಿತ್ರ ಕಾಣಿಸಿಕೊಂಡಿದ್ದು, ಈ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸುತ್ತೇವೆ. ಇದೊಂಡು ವಾಟ್ಸಪ್ ನಲ್ಲಿ ಹರಿದಾಡಿದ ಸುದ್ದಿಯಾಗಿದ್ದು, ಈ ಬಗ್ಗೆ ವಿವರಣೆ ಮುಂದಿದೆ.

ಅಂದಹಾಗೇ ಈ ಯುವಕನಿಗೆ ಕೃಷ್ಣಾಪುರದ ಚೊಕ್ಕಬೆಟ್ಟು ಎಂಬ ಊರಿನ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತಂತೆ. ಆದರೆ ವಧು ನಿಕಾಹ್ ಗೆ ಇನ್ನೇನು ಕೆಲ ಗಂಟೆಗಳು ಇರುವಾಗಲೇ ಹೃದಯಾಘಾತಕ್ಕೊಳಗಾಗಿ ಆಕೆ ನಿಧನಳಾಗಿದ್ದಾಳೆ. ಹೀಗಾಗಿ ಈ ಮದುವೆ ರದ್ದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದನ್ನ ಹರಿಯಬಿಡಲಾಗಿತ್ತು. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಭಾರೀ ಆತಂಕವನ್ನೂ ಉಂಟು ಮಾಡಿತ್ತು.

Oneindia clarification an Apology on the Mangaluru Whatsapp message story

ಈ ಬಗ್ಗೆ ನಾವು ಹುಡುಗ, ಹುಡುಗಿಯ ಕಡೆಯವರಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದೆವು.. ಕೊನೆಗೆ ಹುಡುಗನ ಸ್ನೇಹಿತರ ಕಡೆಯವರು ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ರದ್ದಾಗಿದ್ದು ಹೌದು ಎಂದು ಹೇಳಿದರು.

ಅಲ್ಲದೇ ಯಾರೋ ಮದುವೆ ಆಮಂತ್ರಣ ಪತ್ರಿಕೆ, ಹುಡುಗ - ಹುಡುಗಿ ಜೊತೆ ಇರುವ ಫೋಟೋವೊಂದನ್ನು ನಮಗೆ ತಲುಪಿಸಿದರು. ನಾವು ಸುದ್ದಿ ನಿಜ ಎಂದು ತಿಳಿದು ಸುದ್ದಿಯನ್ನು ಪ್ರಕಟಿಸಿದೆವು. ಆದರೆ ಯಾರೋ ಕಿಡಿಗೇಡಿಗಳು ಯಾರದೋ ಫೋಟೋವನ್ನ ನಮಗೆ ರವಾನಿಸಿದ್ದಾರೆ ಎಂಬುದು ಸುದ್ದಿ ಪ್ರಕಟವಾದ ನಂತರ ಗೊತ್ತಾಯಿತು. ಈ ಬಗ್ಗೆ ಓದುಗರು ನಮಗೆ ಮಾಹಿತಿ ನೀಡಿದರು. ತಕ್ಷಣ ನಾವು ಫೋಟೋವನ್ನ ತೆಗೆದು ಹಾಕಿ ಸುದ್ದಿಯನ್ನು ತಿದ್ದುಪಡಿ ಮಾಡಿದೆವು.

ಸಂಜೆ ನಂತರ ಬೇರೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದೇನೆಂದರೆ ವಧು, ವರನನ್ನ ಮದುವೆಯಾಗಲು ತಿರಸ್ಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಹುಡುಗನ ಕಡೆಯವರು ' ವಧು ಸತ್ತಿದ್ದಾಳೆಂದು' ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹರಿಯ ಬಿಡಲಾಯಿತು.

Oneindia clarification an Apology on the Mangaluru Whatsapp message story

ಈ ಅಂಶವನ್ನು ಸಹ ನಾವು ಇದೇ ಸುದ್ದಿಯಲ್ಲಿ ಸೇರಿಸಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಚ್ಚರಿಸಿದ್ದೆವು. ಅಷ್ಟೇ ಅಲ್ಲ, ಈ ಕುರಿತು ಮಾಹಿತಿಯನ್ನು ಪಡೆಯಲು ನಾವು ಇಬ್ಬರು ಮನೆಯವರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯನ್ನು ಹಾಗೂ ಆಮಂತ್ರಣ ಪತ್ರಿಕೆಯ ಚಿತ್ರವನ್ನು ಪ್ರಕಟಿಸಿದ್ದೆವು. ಈ ಸುದ್ದಿ ಪ್ರಕಟಿಸಿರುವುದು ಯಾರಿಗಾದರೂ ನೋವುಂಟು ಮಾಡಿದ್ದಲ್ಲಿ ನಾವು ವಿಷಾದಿಸುತ್ತೇವೆ. ಈ ಸುದ್ದಿಯನ್ನು ಪ್ರಕಟಿಸುವುದರ ಹಿಂದೆ ನಮಗೆ ಯಾವುದೇ ದುರುದ್ದೇಶವಿರಲಿಲ್ಲ. ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

English summary
Oneindia here by tenders an apology about the misplacement of image on the Mangaluru Whatsapp message story. Article updated later in the evening but due to the technical error it didn't reflect on the Home page. Upon request story has been removed and clarification for the same is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X