ಪೂರ್ಣ ಪ್ರಮಾಣದ ಬಜೆಟ್ ಮಂಡಣೆಗೆ ಸಿದ್ದರಾಮಯ್ಯ ಸಮ್ಮತಿ: ರೇವಣ್ಣ
Recommended Video
ಮಂಗಳೂರು, ಜೂನ್ 19: ಇತ್ತೀಚೆಗೆ ಭಾರೀ ಮಳೆಯಿಂದ ಹದಗೆಟ್ಟಿದ್ದ ಚಾರ್ಮಾಡಿ ಘಾಟಿ ರಸ್ತೆಯ ಪರಿಶೀಲನೆ ನಡೆಸಿದ್ದೇನೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ತಡೆಗೋಡೆ ಹಾಗೂ ಸೇತುವೆ ನಿರ್ಮಾಣವಾಗಬೇಕಿದೆ. ಅದಕ್ಕಾಗಿ ಕೇಂದ್ರ ಸರಕಾರಕ್ಕೆ 250 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಮಂಗಳೂರಿನಲ್ಲಿ
ಮಾಧ್ಯಮ
ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಅವರು
ಚಾರ್ಮಾಡಿ
ಘಾಟ್
ರಸ್ತೆ
ರಾಷ್ಟ್ರೀಯ
ಹೆದ್ದಾರಿಯಾಗಿರುವುದರಿಂದ
ಕೇಂದ್ರ
ಸರಕಾರ
ಹಣ
ಬಿಡುಗಡೆ
ಮಾಡಬೇಕು
ಎಂದು
ಒತ್ತಾಯಿಸಿದರು.
ಇದೇ
ವೇಳೆ
ಭಾರೀ
ಮಳೆಯಿಂದಾಗಿ
ಶಿರಾಡಿ
ಘಾಟ್
ರಸ್ತೆ
ದುರಸ್ತಿ
ಕಾಮಗಾರಿ
ವಿಳಂಬವಾಗಿದೆ
ಎಂದು
ತಿಳಿಸಿದರು.
ರಸ್ತೆ
ದುರಸ್ತಿ
ಕಾಮಗಾರಿಯ
ಗುತ್ತಿಗೆದಾರರನ್ನು
ಸಂಪರ್ಕಿಸಿ
ಮಾತನಾಡಿದ್ದೇನೆ.
ಜುಲೈ
ಮೊದಲ
ವಾರದಲ್ಲಿ
ಶಿರಾಡಿ
ಘಾಟ್
ಸಂಚಾರಕ್ಕೆ
ತೆರೆಯುವ
ನಿರೀಕ್ಷೆಯಿದೆ
ಎಂದು
ಅವರು
ಸ್ಪಷ್ಟಪಡಿಸಿದರು.
ಕಳೆದ
ಮೇ
29
ರಂದು
ಸುರಿದ
ಮಹಾಮಳೆಗೆ
ಇತಿಹಾಸದಲ್ಲೇ
ಮೊದಲ
ಬಾರಿ
ಮಂಗಳೂರು
ಮುಳುಗಿದೆ.
ಈ
ಬಗ್ಗೆ
ಅಧಿಕಾರಿಗಳ
ಜತೆ
ಮಾತನಾಡಿದ್ದೇನೆ.
ಗುಂಡಿಗಳನ್ನು
ಮುಚ್ಚಲು
ಮೊದಲ
ಆದ್ಯತೆ
ನೀಡಲು
ಸೂಚಿಸಿದ್ದೇನೆ.
ಒತ್ತುವರಿ
ಸಮಸ್ಯೆಯಿದ್ದರೆ
ಕಾರ್ಪೋರೇಷನ್
ಅಧಿಕಾರಿಗಳು
ಕ್ರಮ
ಕೈಗೊಳ್ಳಬೇಕು.
ನಮ್ಮ
ಇಲಾಖೆಗೆ
ಸಂಬಂಧಪಟ್ಟದಿದ್ದರೆ
ಕ್ರಮ
ಕೈಗೊಳ್ಳುತ್ತೇನೆ
ಎಂದು
ಅವರು
ಹೇಳಿದರು.
ಧರ್ಮಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆದ ವಿಚಾರ ಪ್ರಸ್ತಾಪಿಸಿದ ರೇವಣ್ಣ, "ಉಜಿರೆಯ ಶಾಂತಿವನಕ್ಕೆ ತೆರಳಿ ಸಿದ್ಧರಾಮಯ್ಯನವರ ಆರೋಗ್ಯ ವಿಚಾರಿಸಿದ್ದೇನೆ. ಚಾರ್ಮಾಡಿಗೆ ಭೇಟಿ ನೀಡಿ ಬರುತ್ತಿದ್ದ ವೇಳೆ ಸಿದ್ಧರಾಮಯ್ಯರ ಜತೆ ಮಾತನಾಡಿದ್ದೇನೆ ಅಷ್ಟೆ. ಅದರಲ್ಲಿ ವಿಶೇಷವೇನೂ ಇಲ್ಲ," ಎಂದರು.
"ಸಿದ್ಧರಾಮಯ್ಯನವರ ಆರೋಗ್ಯ ಚೆನ್ನಾಗಿದೆ. ಆರು ತಿಂಗಳಿಗೊಮ್ಮೆ ಅವರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಭೇಟಿ ಸ್ನೇಹಕ್ಕೆ ಮಾತ್ರ ಸೀಮಿತ ಹೊರತು ರಾಜಕೀಯ ವಿಚಾರ ಇಲ್ಲಿ ಚರ್ಚೆಯಾಗಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು.
"ಬಜೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾವು ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ ಬಗ್ಗೆ ಸಿದ್ದರಾಮಯ್ಯನರಿಗೆ ಯಾವುದೇ ಅಸಮಾಧಾನವಿಲ್ಲ. ಬಜೆಟ್ ಮಂಡನೆಗೆ ಅವರು ಸಮ್ಮತಿಸಿದ್ದಾರೆ," ಎಂದು ಹೇಳಿದರು.