ಮಂಗಳೂರು ಪಾಲಿಕೆ ಚುನಾವಣೆ; ನಳಿನ್ ಕುಮಾರ್ ಅಬ್ಬರದ ಪ್ರಚಾರ
ಮಂಗಳೂರು, ನವೆಂಬರ್ 7: ನ.12 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ.
ಟ್ವೀಟ್ ಬಾಣ; ಗೌಡರಿಂದ ಡಿಸಿಎಂ, ಪರಮೇಶ್ವರರಿಂದ ಸಿಎಂ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮಂಗಳೂರು ಪಾಲಿಕೆ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಸುರತ್ಕಲ್ ಪ್ರದೇಶದಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ, ಅಭೂತಪೂರ್ವ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮನೆಮನೆಗೆ ತೆರಳಿ ಮತ ಯಾಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್, "ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರದ್ದೇ ನಾಯಕರೊಬ್ಬರು ಹಿಂದೆ ಸಿದ್ದರಾಮಯ್ಯ ಬಂದಾಗ ಹತ್ತು ಸೀಟ್ ಹೋಗಿದೆ ಅಂತ ಹೇಳಿದ್ರು. ಈ ಬಾರಿ ಇಪ್ಪತ್ತು ಸೀಟ್ ಹೋಗೋದು ಖಚಿತ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಎಂದು ನಾವ್ ಹೇಳಲ್ಲ, ಅವ್ರದ್ದೇ ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ" ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಉತ್ತರ ಶಾಸಕ ಭರತ್ ಶೆಟ್ಟಿ , ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಳಿನ್ ಕುಮಾರ್ ಗೆ ಸಾಥ್ ನೀಡಿದರು.