ಮಂಗಳೂರು: ಸ್ನೇಹಿತರ ಕಿತ್ತಾಟ, ಕೊಲೆಯಲ್ಲಿ ಅಂತ್ಯ
ಮಂಗಳೂರು. ಮೇ.22: ಮಂಗಳೂರಿನಲ್ಲಿ ಯುವಕನೊಬ್ಬನನ್ನು ಆತನ ನಾಲ್ವರು ಸ್ನೇಹಿತರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸಂಜಯ್ ಅಲಿಯಾಸ್ ವರುಣ್ (19) ಕೊಲೆಯಾದ ಯುವಕ. ನಗರದ ಬೋಳಾರ್ ಸಮೀಪದ ರೈಸ್ ಮಿಲ್ ಹತ್ತಿರ ಮೇ.22 ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ನಾಲ್ವರು ಸ್ನೇಹಿತರು ಅಕ್ರಮ ಗಾಂಜಾ ವಹಿವಾಟು ನಡೆಸುತ್ತಿದ್ದು, ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.[ಮಂಗಳೂರು: ರವಿ ಪೂಜಾರಿ ಸಹಚರ ಸೆರೆ]
ಪಡೀಲ್ ಹೋಮ್ ಸ್ಟೇ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಜಯ್ ಈ ಕೊಲೆ ಕೃತ್ಯದಲ್ಲಿ ಶಮೀಲಾಗಿದ್ದು ಪರಾರಿಯಾಗಿದ್ದಾನೆ. ಕೊಲೆಯಾದ ವರುಣ್ ಮೃತ ದೇಹವನ್ನು ನಗರದ ಎಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Comments
English summary
Varun (18), son of Jagadeesh alias Talwar Jagga was murdered near Kudru Kallurti Temple in Urwa Mangalore district on Thursday, May 22, afternoon.