ಮಂಗಳೂರು : ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ
ಮಂಗಳೂರು, ಫೆ. 25 : ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಉಳ್ಳಾಲ ಪೊಲೀಸರು ಮತ್ತು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನ
ಕೋಟೆಕಾರು
ಪ್ರದೇಶದಲ್ಲಿರುವ
ಸಂತ
ಜೋಸೆಫ್
ವಾಜ್
ಪ್ರಾರ್ಥನಾ
ಮಂದಿರದ
ಮೇಲೆ
ಮಂಗಳವಾರ
ರಾತ್ರಿ
ಕಿಡಿಗೇಡಿಗಳು
ಕಲ್ಲು
ತೂರಾಟ
ನಡೆಸಿದ್ದಾರೆ.
ಇದರಿಂದ
ಮಂದಿರದ
ಕಿಟಕಿ
ಗಾಜುಗಳು
ಪುಡಿಯಾಗಿದ್ದು,
ಮೇರಿ
ಮಾತೆ
ವಿಗ್ರಹಕ್ಕೆ
ಹಾನಿ
ಉಂಟಾಗಿದೆ.
ಉಳ್ಳಾಲ
ಪೊಲೀಸರು
ಮತ್ತು
ಆರೋಗ್ಯ
ಸಚಿವ
ಯು.ಟಿ.ಖಾದರ್
ಸ್ಥಳಕ್ಕೆ
ಭೇಟಿ
ನೀಡಿ
ಪರಿಶೀಲನೆ
ನಡೆಸುತ್ತಿದ್ದಾರೆ.
ಇದು
ನಿರ್ಜನ
ಪ್ರದೇಶವಾಗಿದ್ದರಿಂದ
ಕಲ್ಲು
ತೂರಾಟ
ನಡೆಸಿರುವ
ಘಟನೆ
ತಡವಾಗಿ
ಬೆಳಕಿಗೆ
ಬಂದಿದೆ.
[ಅಲ್ಪಸಂಖ್ಯಾತರೇ
ನಿಮ್ಮ
ರಕ್ಷಣೆಗೆ
ನಾವಿದ್ದೇವೆ
:
ಮೋದಿ
ಅಭಯ]
ವರದಿ ತಿರಸ್ಕಾರ : 2008ರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚರ್ಚ್ ದಾಳಿ ನಡೆದಿತ್ತು. ಈ ದಾಳಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ನ್ಯಾ.ಬಿ.ಕೆ.ಸೋಮಶೇಖರ್ ಅವರ ಆಯೋಗದ ವರದಿಯನ್ನು ತಿರಸ್ಕಾರ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರಕರಣದ ವಿಚಾರಣೆಯನ್ನು ಗೃಹ ಇಲಾಖೆಗೆ ವರ್ಗಾವಣೆ ಮಾಡಿ, ಮರು ತನಿಖೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. [ಕೋಮು ಗಲಭೆಗಳಲ್ಲಿ ಕರ್ನಾಟಕ ದಕ್ಷಿಣದ ನಂ.1]