ಎತ್ತಿನಹೊಳೆ ಗೊಂದಲ ಬಗೆಹರಿಸಲು ಸಿಎಂ ನೇತೃತ್ವದಲ್ಲಿ ಸಭೆ
ಮಂಗಳೂರು, ಸೆಪ್ಟೆಂಬರ್ 24 : ದಕ್ಷಿಣ ಕನ್ನಡ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿರುವ ಎತ್ತಿನಹೊಳೆ ಯೋಜನೆ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಲು ಒಂದು ವಾರದೊಳಗೆ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸೂಚಿಸಿರುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.
ಪಿಲಿಕುಳದಲ್ಲಿ
ಪತ್ರಿಕಾಗೋಷ್ಠಿ
ನಡೆಸಿ
ಮಾತನಾಡಿದ
ಅವರು,
'ಎತ್ತಿನಹೊಳೆ
ಕುರಿತಾಗಿ
ಜನರಲ್ಲಿ
ಮೂಡಿರುವ
ಸಂಶಯಗಳನ್ನು
ನಿವಾರಿಸಲು
ಸಭೆ
ಕರೆದು
ವಿವರವಾಗಿ
ಚರ್ಚಿಸುವಂತೆ
ಸಲಹೆ
ನೀಡಿದ್ದೇನೆ.
ಇದಕ್ಕೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಒಪ್ಪಿಗೆ
ನೀಡಿದ್ದಾರೆ'
ಎಂದರು.
[ಎತ್ತಿನಹೊಳೆ
:
ಜನಪ್ರತಿನಿಧಿಗಳಿಗೆ
10
ಪ್ರಶ್ನೆಗಳು]
'ಎತ್ತಿನಹೊಳೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಮತ್ತು ಯೋಜನೆಯಿಂದ ದುಷ್ಪರಿಣಾಮ ಉಂಟಾಗಲಿದೆ ಎಂಬ ಎರಡು ಅಂಶಗಳಿವೆ. ಇವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ನ್ಯೂನ್ಯತೆ ಕಂಡು ಬಂದರೆ ಸರ್ಕಾರಕ್ಕೆ ತಿಳಿಸುತ್ತೇನೆ ಮತ್ತು ಹೈಕಮಾಂಡ್ಗೂ ಮಾಹಿತಿ ನೀಡುತ್ತೇನೆ' ಎಂದು ಹೇಳಿದರು. [ಎತ್ತಿನಹೊಳೆ ಯೋಜನೆಗೆ ತಡೆಯಾಜ್ಞೆ]
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ಸಚಿವ ಅಭಯಚಂದ್ರ ಜೈನ್, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮುಂತಾದವರಿದ್ದರು. [ಎತ್ತಿನಹೊಳೆ : ಸಚಿವ ಖಾದರ್ ಕೊಟ್ಟ ಉತ್ತರ]
ತಾತ್ಕಾಲಿಕ ತಡೆಯಾಜ್ಞೆ : ಎತ್ತಿನಹೊಳೆ ಯೋಜನೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚೆನ್ನೈಯ ಹಸಿರು ನ್ಯಾಯಮಂಡಳಿ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದು, ಸೆಪ್ಟಂಬರ್ 28ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯ ತನಕ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.