ಮಂಗಳೂರು ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಇಲಾಖೆ, ಆರ್ ಟಿಓ
ಮಂಗಳೂರು, ಅಕ್ಟೋಬರ್. 16: ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಗಳ ದರ್ಬಾರ್ ಗೆ ಬ್ರೇಕ್ ಹಾಕಲು ಪೊಲೀಸರು ಹಾಗು ಆರ್ ಟಿಓ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಗೆ ಕ್ಯಾರೇ ಅನ್ನದ ಖಾಸಗಿ ಬಸ್ ಗಳ ಮಾಲೀಕರಿಗೆ ಪೊಲೀಸ್ ಇಲಾಖೆ ಹಾಗು ಆರ್ ಟಿಓ ಬಿಸಿ ಮುಟ್ಟಿಸಿದ್ದಾರೆ.
ದಸರಾ ಸಾಲು-ಸಾಲು ರಜೆ : ಕೆಎಸ್ಆರ್ಟಿಸಿಯಿಂದ 2500 ಬಸ್
ಬಚ್ಚಿಡಲಾಗಿದ್ದ ದರ್ಶನ್ ಕಾರು ಶ್ರೀರಂಗಪಟ್ಟಣದಲ್ಲಿ ಪತ್ತೆ: ಅಧಿಕಾರಿಗಳಿಂದ ಪರಿಶೀಲನೆ
ಎಚ್ಚರಿಕೆ ನೀಡಿದರೂ ನಿಯಮಗಳನ್ನು ಗಾಳಿಗೆ ತೂರಿಕೊಂಡು ಅಡ್ಡಾದಿಡ್ಡಿ ಸಾಗುವ ಖಾಸಗಿ ಸಿಟಿ ಬಸ್ ಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದ ಖಾಸಗಿ ಬಸ್ ಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇದೀಗ ನಿಯಮ ಮೀರಿ ಓಡಾಡುತ್ತಿದ್ದ ಖಾಸಗಿ ಸಿಟಿ ಬಸ್ ಗಳನ್ನು ಪೊಲೀಸ್ ಇಲಾಖೆ ಹಾಗು ಆರ್ ಟಿಓ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಾಲಾ ವಾಹನಗಳ ವಿರುದ್ಧ ಆರ್ ಟಿ ಓ ಕ್ರಮ: 212 ದೂರು ದಾಖಲು
ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಮಂಗಳೂರು ಆರ್ ಟಿಒ ಮತ್ತು ಪೊಲೀಸ್ ಅಧಿಕಾರಿಗಳು, ಕರ್ಕಶ ಹಾರ್ನ್ ಬಳಕೆ, ರಸ್ತೆ ನಿಯಮ ಉಲ್ಲಂಘನೆ , ಪರ್ಮಿಟ್ ಇಲ್ಲದೇ ಸಂಚಾರ ನಡೆಸುತ್ತಿದ್ದ 36 ಸಿಟಿ ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಸ್ ಗಳನ್ನು ನಗರದ ನೆಹರು ಮೈದಾನದಲ್ಲಿ ಇರಿಸಲಾಗಿದೆ.