ಪೈಲಟ್ ಸಮಯಪ್ರಜ್ಞೆ, ತಪ್ಪಿದ ಮಿಗ್ ಏರ್ ಕ್ರಾಫ್ಟ್ ದುರಂತ
ಮಂಗಳೂರು: ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಭಾರಿ ದುರಂತದಿಂದ ಏರ್ ಕ್ರಾಫ್ಟ್ ಬಚಾವಾಗಿದೆ. ಭಾರತೀಯ ಸೇನೆಗೆ ಸೇರಿದ ಮಿಗ್ ಏರ್ ಕ್ರಾಫ್ಟ್ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಮಾಡಿದೆ.
ಮಂಗಳೂರು, ಮಾರ್ಚ್ 01: ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಭಾರಿ ದುರಂತದಿಂದ ಏರ್ ಕ್ರಾಫ್ಟ್ ಬಚಾವಾಗಿದೆ. ಭಾರತೀಯ ಸೇನೆಗೆ ಸೇರಿದ ಮಿಗ್ ಏರ್ ಕ್ರಾಫ್ಟ್ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳವಾರ ನಡೆದಿದೆ. ಈ ಏರ್ ಕ್ರಾಫ್ ಚಿತ್ರಗಳು ಇಲ್ಲಿವೆ.
ಮಿಗ್ ಫೈಟರ್-29 ಯುದ್ಧ ವಿಮಾನ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ರನ್ ವೇಗೆ ಏರ್ ಕ್ರಾಫ್ಟ್ ಇಳೀಯುತ್ತಿದ್ದತೆ ವಿಮಾನದ ಎರಡು ಟೈರ್ ಸ್ಫೋಟಗೊಂಡ ಕಾರಣ, ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನಗಳ ಹಾರಾಟವನ್ನು ತಾತಾಲ್ಕಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಬಜ್ಪೆಯ ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆ ಸುಮಾರು 5 ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಒಟ್ಟು 8 ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿತ್ತು. ಮಂಗಳೂರಿಗೆ ಬರುವ ವಿಮಾನಗಳನ್ನು ಬೆಂಗಳೂರಿಗೆ ಕಳಿಸಲಾಯಿತು.
ಗೋವಾದಲ್ಲಿದ್ದ
ಯುದ್ಧ
ವಾಹಕ
ನೌಕೆ
ಐಎನ್
ಎಸ್
ವಿಕ್ರಮಾದಿತ್ಯದಿಂದ
ಮಿಗ್
29
ಟೇಕಾಫ್
ಆಗಿತ್ತು.
Air traffic disrupted temporarily at Mangalore airport view Emergency landing of Naval fighter. Efforts in hand 2 resume services earliest
— SpokespersonNavy (@indiannavy) February 28, 2017
ತರಬೇತಿಗಾಗಿ ಪೈಲಟ್ ಗಳು ಹಾರಾಟ ನಡೆಸುವಾಗ ಹೈಡ್ರಾಲಿಕ್ ಸಮಸ್ಯೆ ಎದುರಾಗಿದೆ. ನಂತರ ತಡ ಮಾಡದೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಏರ್ ಕ್ರಾಫ್ಟ್ ತಿರುಗಿಸಿ ತುರ್ತು ಭೂ ಸ್ಪರ್ಶ ಮಾಡಿದ್ದಾರೆ.
Comments
English summary
A MIG 29 was diverted to Mangaluru airfield following a hydraulic emergency on Tuesday evening, said the Navy. The aircraft experienced a tyre burst during landing making it unable to clear off the runway. Navy spokesperson added that efforts are underway to rectify the aircraft and clear the runway
Story first published: Wednesday, March 1, 2017, 10:05 [IST]