ತಂಗಿಗೆ ಐಸ್ಕ್ರೀಂ ತಂದಿಲ್ಲದಕ್ಕೆ ಪೋಷಕರು ಬೈದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!
ಮಂಗಳೂರು, ಫೆಬ್ರವರಿ 10: ತಂಗಿಗೆ ಐಸ್ಕ್ರೀಂ ತಂದಿಲ್ಲದಕ್ಕೆ ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಶಂಭೂರು ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ಚೆರ್ಕಳದಲ್ಲಿನಡೆದಿದೆ.
ಚೆರ್ಕಳ ನಿವಾಸಿ ಹರ್ಷಿತ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್ ಕ್ರೀಂ ತಂದಿರಲಿಲ್ಲ. ಈ ಕಾರಣಕ್ಕೆ ಮನೆಯಲ್ಲಿ ಬೈದಿದ್ದು, ಇದೇ ಕಾರಣದಿಂದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇತ್ರಾವತಿ
ನದಿಗೆ
ಹಾರಿದ
ವ್ಯಕ್ತಿ:
ಹುಡುಕಾಟ
ಬಂಟ್ವಾಳದ
ನೇತ್ರಾವತಿ
ಸೇತುವೆಯಿಂದ
ವ್ಯಕ್ತಿಯೊಬ್ಬರು
ಸೋಮವಾರ
ರಾತ್ರಿ
ಹಾರಿರುವ
ಕುರಿತು
ವರದಿಯಾಗಿದ್ದು,
ಈ
ಕುರಿತು
ಹುಡುಕಾಟ
ಆರಂಭಗೊಂಡಿದೆ.
ಸೋಮವಾರ
ರಾತ್ರಿ
ಸುಮಾರು
10
ಗಂಟೆ
ಬಳಿಕ
ಘಟನೆ
ನಡೆದಿದ್ದು,
ಸ್ಥಳದಲ್ಲಿ
ಕುತೂಹಲಿಗರು
ಜಮಾಯಿಸಿದ್ದರು.
ಘಟನಾ
ಸ್ಥಳಕ್ಕೆ
ಬಂಟ್ವಾಳ
ಪೊಲೀಸರು
ಭೇಟಿ
ನೀಡಿದ್ದು,
ತನಿಖೆ
ಆರಂಭಿಸಿದ್ದಾರೆ.