ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇತ್ರಾಣಿ ದ್ವೀಪದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ; ಮೀನುಗಾರರ ರಕ್ಷಣೆ

|
Google Oneindia Kannada News

ಭಟ್ಕಳ, ಸೆಪ್ಟೆಂಬರ್ 9: ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮಂಗಳೂರು ಮೂಲದ ಬೋಟ್ ನೇತ್ರಾಣಿ ದ್ವೀಪದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅಲೆಗಳ ರಭಸ ಹೆಚ್ಚಾಗಿ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾ ದೋಣಿಯಲ್ಲಿ ಅಗ್ನಿ ದುರಂತ: ಭಾರತೀಯ ದಂಪತಿ ಸಾವುಕ್ಯಾಲಿಫೋರ್ನಿಯಾ ದೋಣಿಯಲ್ಲಿ ಅಗ್ನಿ ದುರಂತ: ಭಾರತೀಯ ದಂಪತಿ ಸಾವು

ಈ ಬೋಟ್ ನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ಮತ್ತೊಂದು ಬೋಟ್ ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಇವರೆಲ್ಲರೂ ಆಂಧ್ರ ಮೂಲದವರು ಎನ್ನಲಾಗಿದೆ.

Mangaluru Boat Drowns In Netrani Island And Fisherman Rescued

ಸೈಮಾ 1 ಎಂಬ ಈ ಬೋಟ್ ಮಂಗಳೂರಿನ ಮೊಹಮದ್ ಆಸಿಫ್ ಎಂಬುವರಿಗೆ ಸೇರಿದ್ದು, ಭಾನುವಾರ ವೆಂಕಟೇಶ್ ಎಂಬುವರು ಬೋಟ್ ಚಲಾಯಿಸುತ್ತಿದ್ದರು. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಸಮುದ್ರದ ಅಲೆಗಳು ಹೆಚ್ಚಾದ್ದರಿಂದ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಬೋಟ್ ಮುಳುಗಲು ಆರಂಭಿಸಿದೆ. ಕ್ಷಣವೇ ಮತ್ತೊಂದು ಬೋಟ್ ನಲ್ಲಿದ್ದ ಸಿಬ್ಬಂದಿ ಈ ಬೋಟ್ ನಲ್ಲಿದ್ದವರನ್ನು ರಕ್ಷಿಸಿದ್ದು, ಅವರನ್ನು ಮಂಗಳೂರಿಗೆ ಕಳುಹಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮಹಾ ಮಳೆ, ದೋಣಿ ದುರಂತದಲ್ಲಿ 12 ಮಂದಿ ಸಾವುಮಹಾರಾಷ್ಟ್ರದಲ್ಲಿ ಮಹಾ ಮಳೆ, ದೋಣಿ ದುರಂತದಲ್ಲಿ 12 ಮಂದಿ ಸಾವು

ಈ ಅವಘಡದಿಂದ ಸುಮಾರು ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

English summary
The Mangalore based Boat sunk in Netrani Island on Sunday.Ten fishermen in the boat were rescued. The heavy tide was reason behind this accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X