ನೇತ್ರಾಣಿ ದ್ವೀಪದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ; ಮೀನುಗಾರರ ರಕ್ಷಣೆ
ಭಟ್ಕಳ, ಸೆಪ್ಟೆಂಬರ್ 9: ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮಂಗಳೂರು ಮೂಲದ ಬೋಟ್ ನೇತ್ರಾಣಿ ದ್ವೀಪದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅಲೆಗಳ ರಭಸ ಹೆಚ್ಚಾಗಿ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದೆ.
ಕ್ಯಾಲಿಫೋರ್ನಿಯಾ ದೋಣಿಯಲ್ಲಿ ಅಗ್ನಿ ದುರಂತ: ಭಾರತೀಯ ದಂಪತಿ ಸಾವು
ಈ ಬೋಟ್ ನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ಮತ್ತೊಂದು ಬೋಟ್ ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಇವರೆಲ್ಲರೂ ಆಂಧ್ರ ಮೂಲದವರು ಎನ್ನಲಾಗಿದೆ.
ಸೈಮಾ 1 ಎಂಬ ಈ ಬೋಟ್ ಮಂಗಳೂರಿನ ಮೊಹಮದ್ ಆಸಿಫ್ ಎಂಬುವರಿಗೆ ಸೇರಿದ್ದು, ಭಾನುವಾರ ವೆಂಕಟೇಶ್ ಎಂಬುವರು ಬೋಟ್ ಚಲಾಯಿಸುತ್ತಿದ್ದರು. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಸಮುದ್ರದ ಅಲೆಗಳು ಹೆಚ್ಚಾದ್ದರಿಂದ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಬೋಟ್ ಮುಳುಗಲು ಆರಂಭಿಸಿದೆ. ಕ್ಷಣವೇ ಮತ್ತೊಂದು ಬೋಟ್ ನಲ್ಲಿದ್ದ ಸಿಬ್ಬಂದಿ ಈ ಬೋಟ್ ನಲ್ಲಿದ್ದವರನ್ನು ರಕ್ಷಿಸಿದ್ದು, ಅವರನ್ನು ಮಂಗಳೂರಿಗೆ ಕಳುಹಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮಹಾ ಮಳೆ, ದೋಣಿ ದುರಂತದಲ್ಲಿ 12 ಮಂದಿ ಸಾವು
ಈ ಅವಘಡದಿಂದ ಸುಮಾರು ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.