ಮಾಲ್ಗಳನ್ನು ಮುಚ್ಚಲು ಜಿಲ್ಲಾಡಳಿತದ ಆದೇಶಕ್ಕೆ ಕಾದು ಕುಳಿತ ಮಂಗಳೂರು
ಮಂಗಳೂರು,
ಮಾರ್ಚ್
14:
ಕೊರೊನಾ
ಭೀತಿ
ಕರ್ನಾಟಕದುದ್ದಕ್ಕೂ
ಹರಡಿದ್ದು
,ಬೇರೆಯವರಿಗೆ
ಸೋಂಕು
ಹರಡದಂತೆ
ತಡೆಗಟ್ಟಲು
ಸರ್ಕಾರವು
ಮಾಲ್,
ಥಿಯೇಟರ್ಗಳನ್ನು
ಬಂದ್
ಮಾಡುವಂತೆ
ಸರ್ಕಾರ
ಆದೇಶಿಸಿದ್ದರೂ
ಕೂಡ
ಮಂಗಳೂರು
ಮಾತ್ರ
ಜಿಲ್ಲಾಡಳಿತದ
ಆದೇಶಕ್ಕಾಗಿ
ಕಾಯುತ್ತಿದೆ.
ಒಂದೊಮ್ಮೆ
ಮಾಲ್,
ಥಿಯೇಟರ್ಗಳನ್ನು
ಬಂದ್
ಮಾಡಿದರೆ
ತಮಗೆ
ತುಂಬಲಾರದ
ನಷ್ಟ
ಉಂಟಾಗುತ್ತದೆ.
ಜಿಲ್ಲಾಡಳಿತ
ಆದೇಶ
ನೀಡಲಿ
ಆಮೇಲೆ
ನೋಡೋಣ
ಎಂದು
ಜನರು
ಹೇಳುತ್ತಿದ್ದಾರೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಚ್ 14ರಿಂದ ಒಂದು ವಾರದ ಅವಧಿಗೆ ರಾಜ್ಯಾದ್ಯಂತ ಮಾಲ್ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ಗಳನ್ನು ಮುಚ್ಚುವಂತೆ ಆದೇಶ ನೀಡಿದೆ.
ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಆದರೆ ಮಂಗಳೂರಲ್ಲಿ ಮಾತ್ರ ಮಾಲ್, ಥಿಯೇಟರ್ಗಳು, ಮಾರುಕಟ್ಟೆಗಳು ಸೇರಿದಂತೆ ಎಲ್ಲವನ್ನೂ ತೆರೆಯಲಾಗಿದೆ.
ಈ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ. ಎಲ್ಲಾ ಖಾಸಗಿ ಆಸ್ಪತ್ರೆಯವರು ಈ ಸೋಂಕಿನ ಲಕ್ಷಣ ಇರುವ ರೋಗಿಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು.
ಕೊರೊನಾ
ಆತಂಕ:
ಬೆಂಗಳೂರಿನ
ಟ್ರಾಫಿಕ್
ಪೊಲೀಸರು
ಧರಿಸಿದ್ರು
ಮಾಸ್ಕ್
ವಿದೇಶ
ಪ್ರಯಾಣದಿಂದ
ಬಂದ
ಪ್ರಯಾಣಿಕರು
ಆರೋಗ್ಯ
ಇಲಾಖೆಗೆ
ಮಾಹಿತಿ
ನೀಡಬೇಕು.
ಎಲ್ಲಾ
ಆಸ್ಪತ್ರೆಗಳು,
ಚಿಕಿತ್ಸಾಲಯಗಳು,
ಖಾಸಗಿ
ಕ್ಲಿನಿಕ್ನವರು
ಕಳೆದ
ಹದಿನಾಲ್ಕು
ದಿನಗಳಿಂದ
ವಿದೇಶದಿಂದ
ಹಿಂದಿರುಗಿ
ಚಿಕಿತ್ಸೆ
ಪಡೆದವರು
ಇದ್ದಲ್ಲಿ
ಆರೋಗ್ಯ
ಇಲಾಖೆ
ಗಮನಕ್ಕೆ
ತರಬೇಕಾಗುತ್ತದೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಾರ್ವಜನಿಕರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಯಾರನ್ನೂ ಮುಟ್ಟಬೇಡಿ, ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.