ಮಂಗಳೂರು : ಸೆ.22ರಂದು ಕಾರು ಬಿಡಿ, ಸೈಕಲ್ ತುಳಿಯಿರಿ
ಮಂಗಳೂರು, ಸೆಪ್ಟೆಂಬರ್ 08 : ಮಂಗಳೂರು ನಗರದಲ್ಲಿ ಸೆಪ್ಟೆಂಬರ್ 22 ರಂದು ವಿಶ್ವ ಕಾರು ರಹಿತ ದಿನ ಆಚರಣೆ ಮಾಡಲಾಗುತ್ತದೆ. ಕಾಲ್ನಡಿಗೆ, ಸೈಕ್ಲಿಂಗ್ ಹಾಗೂ ಸಮೂಹ ಸಾರಿಗೆಗಳನ್ನು ಉಪಯೋಗಿಸಲು ಉತ್ತೇಜಿಸುವ ಸಲುವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಮಂಗಳೂರು ಬೈಸಿಕಲ್ ಕ್ಲಬ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಲಯನ್ಸ್ ಕ್ಲಬ್ ಮುಂತಾದವುಗಳು ಜಂಟಿಯಾಗಿ ಈ ಅಭಿಯಾನವನ್ನು ನಗರದಲ್ಲಿ ಆಯೋಜಿಸಿವೆ.[ವೆಬ್ ಸೈಟ್ ಆರಂಭಿಸಿದ ಮಂಗಳೂರು ಬೈಸಿಕಲ್ ಕ್ಲಬ್]
ಸೆ. 22 ರಂದು 'ವಿಶ್ವ ಕಾರು ರಹಿತ ದಿನ'ವನ್ನು ಹಲವು ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಂಗಳೂರಿನಲ್ಲಿಯೂ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಮತ್ತು ಪ್ರತಿ ತಿಂಗಳ 3ನೇ ಶನಿವಾರ ವಾಹನ ರಹಿತ ದಿನ ನಡೆಸಲು ನಿರ್ಧರಿಸಲಾಗಿದೆ.[ಬೈಸಿಕಲ್ ಗಿದೆ ತ್ರಿಚಕ್ರ ವಾಹನದ ನಂಬರ್ ಪ್ಲೇಟ್]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಸೆ. 22 ರಂದು ನಗರದ ಟೌನ್ ಹಾಲ್ನಿಂದ ಬೆಳಗ್ಗೆ 7.30ಕ್ಕೆ ಬೈಸಿಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.[8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]
ಜಾಥಾದಲ್ಲಿ ಪಾಲ್ಗೊಳ್ಳ ಬಯಸುವವರು ಹೆಸರು ಮತ್ತು ವಿವರಗಳನ್ನು [email protected] ಗೆ ಸಪ್ಟೆಂಬರ್ 15ರೊಳಗೆ ಕಳಿಸಬೇಕು. ಹೆಚ್ಚಿನ ವಿವರಗಳಿಗೆ www.mangalorebicycleclub.com ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.