ಮಲಯಾಳಂ ಕಡ್ಡಾಯ, ಕಾಸರಗೋಡು ಕನ್ನಡಿಗರಿಂದ ಮೇ 23ರಂದು ಪ್ರತಿಭಟನೆ
ಮೇ 23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ನಿರ್ಧರಿಸಿವೆ. ಇನ್ನು ಇವತ್ತು #KasaragoduKannadaUlisi ಹ್ಯಾಷ್ ಟ್ಯಾಗ್ ಮೂಲಕ ಪ್ರತಿಭಟನಾ ಸಂದೇಶ ಸಾರಲಾಯಿತು.
ಕಾಸರಗೋಡು, ಮೇ 21: ಕೇರಳ ಸರಕಾರ 10ನೇ ತರಗತಿವರೆಗೆ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಮೇ 23ರಂದು ಪ್ರತಿಭಟನೆ ನಡೆಸಲಿವೆ.
ಕನ್ನಡ ಶಾಲೆಗಳು ಹೆಚ್ಚಾಗಿರುವ ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯದಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮೇಲೆ ಹೊಡೆತ ಬೀಳಲಿದೆ. ಕನ್ನಡ ಹಾಗೂ ಪ್ರಾದೇಶಿಕ ಸಂಸ್ಕೃತಿಯೇ ನಾಶವಾಗಲಿದೆ ಎನ್ನುವ ಕಾರಣವನ್ನು ಮುಂದೊಡ್ಡಿ ಕನ್ನಡ ಪರ ಸಂಘಟನೆಗಳು ಮೇ 23ರಂದು ಪ್ರತಿಭಟನೆ ನಡೆಸಲಿವೆ.
ಮೇ 23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ನಿರ್ಧರಿಸಿವೆ.
@astitvam @VishweshwarBhat @OneindiaKannada @PMOIndia @CMOKerala @vinayakmuroor @GBallamoole @daijiworld247 @daijiworldmgl @Jaggesh2 @suvarnanewstv @Kannadiga8 @Kannadiga1956 ಕೇರಳ ಸರ್ಕಾರದ #ಮಲಯಾಳಂ ಭಾಷೆ ಕಡ್ಡಾಯ ಆದೇಶ ವಿರೋಧಿಸಿ #ಕನ್ನಡಿಗ ರಿಂದ ಮೇ 23ಕ್ಕೆ#KasaragoduKannadaUlisi ಆಂದೋಲನ#Kannada#ಕನ್ನಡ#ನಮ್ಮಕನ್ನಡ#ಕನ್ನಡಉಳಿಸಿ pic.twitter.com/MDnOwRdNV2
— #GiveUpAMeal Pradeep (@mpsbhat) May 21, 2017
ಇನ್ನು ಇವತ್ತು 'ಕಾಸರಗೋಡು ಕನ್ನಡ ಉಳಿಸಿ'
#KasaragoduKannadaUlisi ಹ್ಯಾಷ್ ಟ್ಯಾಗ್ ಮೂಲಕ ಪ್ರತಿಭಟನಾ ಸಂದೇಶ ಸಾರಲಾಯಿತು. ಹಲವಾರು ಜನ ಈ ಮೂಲಕ #KasaragoduKannadaUlisi ಹೆಸರಿನಲ್ಲಿ ಸಂದೇಶಗಳನ್ನು ರವಾನಿಸಿ ತಮ್ಮ ವಿರೋಧವನ್ನು ದಾಖಲಿಸಿದರು.
{promotion-urls}