ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನ ಹತ್ಯೆ: ಇಂದು ಹರತಾಳ
ಮದ್ರಾಸಾದ ಶಿಕ್ಷಕನೊಬ್ಬನನ್ನು ಅಪರಿಚಿತ ತಂಡವೊಂದು ಕೊಲೆ ಮಾಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮಂಗಳೂರು / ಕಾಸರಗೋಡು, ಮಾರ್ಚ್ 21: ಮದ್ರಸಾ ಅಧ್ಯಾಪಕನೋರ್ವನನ್ನು ತಂಡವೊಂದು ಅಧ್ಯಾಪಕರ ಕೋಣೆಗೆ ನುಗ್ಗಿ ಇರಿದು ಕೊಲೆಗೈದ ಘಟನೆ ಸೋಮವಾರ ಮಧ್ಯರಾತ್ರಿ ಕಾಸರಗೋಡಿನಲ್ಲಿ ನಡೆದಿದೆ. ಕೊಡಗು ಮೂಲದ ನಿವಾಸಿ ರಿಯಾಝ್ (30) ಕೊಲೆಗೀಡಾದ ಮದ್ರಸಾ ಅಧ್ಯಾಪಕ.
ಮಸೀದಿ ಸಮೀಪವೇ ಉಸ್ತಾದರಿಗೆ 2 ಕೊಠಡಿಗಳಿದ್ದು ಒಂದು ಕೊಠಡಿಯಲ್ಲಿ ರಿಯಾಝ್ ಉಸ್ತಾದ್ ಹಾಗೂ ಇನ್ನೊಂದು ಕೊಠಡಿಯಲ್ಲಿ ಮಸೀದಿ ಖತೀಬ್ ಆಬ್ದುಲ್ ಅಝೀಝ್ ಮುಸ್ಲಿಯಾರ್ ಮಲಗಿದ್ದರು.[ಮಂಗಳೂರು: ಮಸೀದಿಗೆ ಕಲ್ಲು ತೂರಿದ ಕಿಡಿಗೇಡಿ ಸಿಕ್ಕಿಬಿದ್ದ!]
ಮಧ್ಯರಾತ್ರಿ ಶಬ್ದ ಕೇಳಿ ಖತೀಬ್ ಉಸ್ತಾದ್ ಕೊಠಡಿ ಬಾಗಿಲು ತೆರೆಯುವಷ್ಟರಲ್ಲಿ ಯದ್ವಾತದ್ವ ಕಲ್ಲು ತೂರಾಟ ನಡೆಯುತ್ತಿತ್ತೆನ್ನಲಾಗಿದೆ. ಮೈಕ್ ಮೂಲಕ ರಿಯಾಝ್ ಉಸ್ತಾದ್ ಮೇಲೆ ಇರಿತ ನಡೆದಿದೆಯೆಂದು ಖತೀಬ್ ಉಸ್ತಾದ್ ಹೇಳಿಕೆ ನೀಡಿದರು.[ಮಂಗಳೂರು: ಸಿಡಿಮದ್ದು ತಯಾರಿ ವೇಳೆ ಸ್ಫೋಟ, ಇಬ್ಬರು ಸಾವು]
ಚೀರಾಟ ಕೇಳಿದ ಸ್ಥಳೀಯರು ಓಡಿಬಂದು, ರಕ್ತದ ಮುಡುವಿನಲ್ಲಿದ್ದ ರಿಯಾಝ್ ಉಸ್ತಾದರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಡಿವೈಎಸ್ಪಿ ವಿ.ಸುಕುಮಾರನ್ , ಸರ್ಕಲ್ ಇನ್ ಸ್ಪೆಕ್ಟರ್ ಅಬ್ದುಲ್ ರಹಮಾನ್, ಉತ್ತರ ವಲಯ ಎಡಿ ಜಿಪಿ ರಾಜೇಶ್ ದಿವಾನ್ , ಐಜಿ ಮಹಿಪಾಲ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಕೊಲೆಯನ್ನು ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು (ಮಾರ್ಚ್ 21)ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಮುಸ್ಲಿಂ ಲೀಗ್ ಹರತಾಳಕ್ಕೆ ಕರೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.