ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.9ರವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ 'ಸರ್ಪ ಸಂಸ್ಕಾರ ಸೇವೆ' ಇಲ್ಲ

By Vanitha
|
Google Oneindia Kannada News

ಮಂಗಳೂರು, ಮಾರ್ಚ್,04: ನೀವು ಏನಾದರೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಿಸಬೇಕೆಂದಿದ್ದರೆ ಮಾರ್ಚ್ 9ರವರೆಗೆ ಕಾಯಬೇಕು. ಏಕೆಂದರೆ ಏಕಾದಶಿ, ದ್ವಾದಶಿ, ಮಹಾಶಿವರಾತ್ರಿ ಹಾಗೂ ಸೂರ್ಯ ಗ್ರಹಣ ಹೀಗೆ ಸರಣಿ ದಿನಗಳು ಬರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರ್ಚ್ 9ರವರೆಗೆ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ.

ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಗದಿಯಾದ ಸರ್ಪ ಸಂಸ್ಕಾರ ಸೇವೆಗಳು ಶುಕ್ರವಾರ ಮಧ್ಯಾಹ್ನ ಮುಕ್ತಾಯವಾಗುತ್ತದೆ. ಶನಿವಾರ (ಮಾ.5) ಏಕಾದಶಿ, ಭಾನುವಾರ (ಮಾ.6) ಶ್ರವಣ ಉಪವಾಸ, ಸೋಮವಾರ (ಮಾ.7) ದಂದು ಮಹಾಶಿವರಾತ್ರಿ, ಮಂಗಳವಾರ (ಮಾ.9) ಸೂರ್ಯಗ್ರಹಣ ಇರುವುದರಿಂದ ಈ ನಿರ್ಣಯಕ್ಕೆ ಬರಲಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಯು ಪೂವಪ್ಪ ತಿಳಿಸಿದ್ದಾರೆ.[ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ: ಇತಿಹಾಸ, ಆಚರಣೆ ಮಹತ್ವ]

Kukke Subramanya temple gives break to Sarpa Samskara pooja from March 4th to 9th

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಉಮಾಮಹೇಶ್ವರಿ ದೇವಾಲಯದಲ್ಲಿ ಏಕರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ. ಸಂಜೆ 7ಕ್ಕೆ ವಿಶೇಷ ಉತ್ಸವ ಹಾಗೂ ಮಾರ್ಚ್ 8ರ ಸೋಮವಾರ ಸಂಜೆ ಶಿವರಾತ್ರಿ ರಥೋತ್ಸವ ನಡೆಯಲಿದೆ. ಈ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಪೂವಪ್ಪ ತಿಳಿಸಿದರು.

English summary
Ekadashi (March 5), Shravana Upavasa (March 6), Maha shivaratri ( March 7), Surya Grahana ( March 9) So Kukke subramanya temple committee members give break to Sarpa Samskara pooja from March 4th to 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X