ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಗೋಡು: ಯುವತಿ ಸಾವಿಗೆ ಕಾರಣವಾಯ್ತು ದುಪ್ಪಟ್ಟಾ

|
Google Oneindia Kannada News

ಕಾಸರಗೋಡು, ಮಾರ್ಚ್. 03 : ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ವೇಳೆ ಯುವತಿಯ ದುಪ್ಪಟ್ಟಾ ಗ್ರೈಂಡರ್ ಗೆ ಸಿಲುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕುಂಬಳೆಯ ಶಿರಿಯಾದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಒಳಯಂ ನಿವಾಸಿ ಸಯ್ಯದ್ ಎಂಬವರ ಪತ್ನಿ ಆಯಿಷತ್ ಮುನೈಫ್ (21) ಎಂದು ಗುರುತಿಸಲಾಗಿದೆ. ಮುನೈಫಾ ಅವರು ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದುಪ್ಪಟ್ಟಾ ಗ್ರೈಂಡರ್ ಚಕ್ರಕ್ಕೆ ಸಿಲುಕಿದೆ.

kasargod 21-year-old Women dies ofter her dupatta entangled in grinder

ಗ್ರೈಂಡರ್ ವೇಗವಾಗಿ ತಿರುಗುತ್ತಿದ್ದರಿಂದ ದುಪ್ಪಟ್ಟಾ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದೆ. ಇದರಿಂದ ಆಯಿಷತ್ ಳ ಚಿರಾಟವನ್ನು ಕೇಳಿ ಅತ್ತೆ-ಮಾವ ಧಾವಿಸಿ ಸ್ವಿಚ್ ಆಫ್ ಮಾಡಿ ಗ್ರೈಂಡರ್ ಸ್ಥಗಿತಗೊಳಿಸಿ, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟೋತ್ತಿಗಾಗಲೇ ಆಯಿಷತ್ ಳ ಆಯುಷ ಮುಗಿದಿತ್ತು.

ಒಂದೂವರೆ ವರ್ಷದ ಹಿಂದೆಯಷ್ಟೇ ಆಯಿಷತ್ ಳಿಗೆ ವಿವಾಹವಾಗಿದ್ದು. ಎಂಟು ತಿಂಗಳ ಮಗು ಇದೆ. ತಾಯಿಯ ಮರಣದಿಂದಾಗಿ 8 ತಿಂಗಳ ಹಸುಳೆ ಈಗ ತಬ್ಬಲಿಯಾಗಿದೆ.

ಕುಂಬಳೆ ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತ ದೇಹವನ್ನು ಒಪ್ಪಿಸಿದರು.

English summary
A 21-year-old woman (ayesha munaf) died in a freak accident after her dupatta got trapped in a grinder at a home in Shiriya, Kasargod district on March 03.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X