ಹಜ್ಗೆ ತೆರಳಿದ್ದ ಕಾಸರಗೋಡಿನ ಯಾತ್ರಾರ್ಥಿ ಸಾವು
ಕಾಸರಗೋಡು, ಸೆಪ್ಟೆಂಬರ್ 03 : ಹಜ್ ಒಂದು ಪವಿತ್ರ ಯಾತ್ರೆ. ಎಷ್ಟೋ ಮುಸ್ಲಿಮರು ಹಜ್ ಯಾತ್ರೆಗೆ ಹೋಗಲು ಇಚ್ಛಿಸುತ್ತಾರೆ. ಆದರೆ ಇಂತಹ ಪವಿತ್ರ ಯಾತ್ರೆಗೆ ತೆರಳಿದ ಕಾಸರಗೋಡು ಮೂಲದ ಯಾತ್ರಿಕರೊಬ್ಬರು ಸಾವನ್ನಪ್ಪಿದ್ದಾರೆ.
ಶುಕ್ರವಾರ
ರಾತ್ರಿ
ಮೆಕ್ಕಾದ
ಕಿಂಗ್
ಅಬ್ದುಲ್
ಆಝೀಝ್
ಆಸ್ಪತ್ರೆಯಲ್ಲಿ
ಕಾಸರಗೋಡು
ನಿವಾಸಿ
ಅಬೂಬಕ್ಕರ್
(
73)
ಮೃತಪಟ್ಟಿದ್ದಾರೆ.
ಮೃತರು
ಅಸೌಖ್ಯದಿಂದ
ಬಳಲುತ್ತಿದ್ದರು,
ಹಜ್
ಯಾತ್ರೆಯಲ್ಲೇ
ಮರಣ
ಹೊಂದಬೇಕು
ಎಂದು
ಬಯಸಿದ್ದರು
ಎಂದು
ತಿಳಿದುಬಂದಿದೆ.
ಪತ್ನಿ
ಸಮೇತರಾಗಿ
ಅವರು
ಮಕ್ಕಾ
ಮದೀನಾ
ಪ್ರವಾಸಕ್ಕೆ
ತೆರಳಿದ್ದರು.[ಮಂಗಳೂರಲ್ಲಿ
ಶೀಘ್ರವೇ
ಹಜ್
ಭವನ
ನಿರ್ಮಾಣ]
ಆಗಸ್ಟ್ 4 ರಂದು ಅಬೂಬಕ್ಕರ್ ಅವರು ಕರ್ನಾಟಕದ ಮೊದಲ ಹಜ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಪವಿತ್ರ ಮದೀನಾದಲ್ಲಿ 8 ದಿನಗಳ ಕಾಲ ತಂಗಿದ್ದು, ಮದೀನಾ ಝೀಯಾರತ್ ನಡೆಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.[ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿಗಳು]
ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಂಡಿದ್ದರು. ಆದರೆ, ಶುಕ್ರವಾರ ತೀರಾ ಅಸ್ವಸ್ಥತೆಯಿಂದಾಗಿ ಬಳಲುತ್ತಿರುವುದನ್ನು ಕಂಡು ಪುನಃ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.