ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ರಮಾನಾಥ್ ರೈ ಆಪ್ತರ ಮೇಲೆ‌ ಐಟಿ ದಾಳಿ, ಇಬ್ಬರು ವಶಕ್ಕೆ

By ಕಿರಣ್ ಸಿರ್ಸೀಕರ್
|
Google Oneindia Kannada News

Recommended Video

ಮಂಗಳೂರಿನ ಬಂಟ್ವಾಳದಲ್ಲಿ ರಮಾನಾಥ್ ರೈ ಆಪ್ತರ ಮೇಲೆ ಐ ಟಿ ದಾಳಿ | Oneindia Kannada

ಮಂಗಳೂರು, ಮೇ 10: ಭಾರೀ ಕುತೂಹಲ ಕೆರಳಿಸಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಕ್ರಮ ಹಣ ಕೂಡಿಟ್ಟ ಆರೋಪದ ಮೇಲೆ ರಮಾನಾಥ್ ರೈ ಅವರ ಇಬ್ಬರು ಆಪ್ತರ ಮೇಲೆ‌ ಐಟಿ ದಾಳಿ ನಡೆದಿದೆ. ಜೊತೆಗೆ ಇಬ್ಬರೂ ಅಪ್ತರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ಮೇಲೆ ಬಿತ್ತು ಐಟಿ ಕಣ್ಣುಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತನ ಮೇಲೆ ಬಿತ್ತು ಐಟಿ ಕಣ್ಣು

ಇವರಲ್ಲಿ ಡೆನ್ಜಿಲ್ ಡಿಸೋಜಾ ರಮಾನಾಥ ರೈ ಅವರ ಆಪ್ತ ಸಹಾಯಕರಾಗಿದ್ದು ಅವರನ್ನೂ ವಶಕ್ಕೆ ಪಡೆಯಲಾಗಿದೆ.

IT conducts raid on close associates of Ramanath Rai

ಬುಧವಾರ ತಡರಾತ್ರಿ ಈ ದಾಳಿ ನಡೆದಿದ್ದು ಬಂಟ್ವಾಳ ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ನಾಯಕರು ಮತ್ತು ನಾಯಕರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದ್ದು, ಈ ಸಾಲಿಗೆ ಇದೀಗ ದಕ್ಷಿಣ ಕನ್ನಡದ ಹಿರಿಯ ನಾಯಕ ರಮಾನಾಥ ರೈ ಕೂಡ ಸೇರ್ಪಡೆಯಾಗಿದ್ದಾರೆ.

English summary
Karnataka assembly elections 2018: Income tax officials conduct raids at Mangaluru and Bantwal on close associates of Dakshina Kannada incharge minister B Ramanath Rai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X