ಜಲಪ್ರಳಯ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಇಸ್ರೋ ವಿಜ್ಞಾನಿಗಳು
ಮಂಗಳೂರು, ಆಗಸ್ಟ್.22: ಗುಡ್ಡ ಕುಸಿತ, ಜಲಪ್ರಳಯ ಸಂಭವಿಸಿದ ಸ್ಥಳಗಳಿಗೆ ಇಂದು ಬುಧವಾರ ಇಸ್ರೋ ವಿಜ್ಞಾನಿಗಳು ಭೇಟಿ ನೀಡುತ್ತಿದ್ದಾರೆ. ಮದೆನಾಡು, ಜೋಡುಪಾಲ, ಸಂಪಾಜೆ, ಕಲ್ಮಕಾರಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ.
4 ಮಂದಿ ವಿಜ್ಞಾನಿಗಳ ತಂಡ ಸಮಸ್ಯೆಯಾಗಿರುವ ಸ್ಥಳಗಳಿಗೆ ಭೇಟಿ ನೀಡಲಿದೆ. ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವ ವಿಜ್ಞಾನಿಗಳು, ಬಳಿಕ ದ.ಕ.ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡುವರು.
'ಸಂಶೋಧನೆ ಸಮಾಜಕ್ಕೆ ತಲುಪಿಸುವುದೇ ವಿಜ್ಞಾನಿಗಳಿಗೆ ಸವಾಲು'
ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ನಂತರ ಸ್ಥಳಕ್ಕೆ ವಿಜ್ಞಾನಿಗಳು ಭೇಟಿ ನೀಡಲಿದ್ದಾರೆ. ಆ ನಂತರ ಭಾರೀ ಸಮಸ್ಯೆಗೀಡಾಗಿರುವ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಜಲಸ್ಫೋಟ, ಗುಡ್ಡಕುಸಿತದ ಕಾರಣ ತಿಳಿಯುವ ಸಲುವಾಗಿ ವಿಜ್ಞಾನಿಗಳು ಭೇಟಿ ನೀಡುತ್ತಿರುವುದು ತಿಳಿದು ಬಂದಿದೆ.
Comments
isro scientists karnataka floods kodagu dakshina kannada district news ಇಸ್ರೋ ವಿಜ್ಞಾನಿಗಳು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾಸುದ್ದಿ
English summary
ISRO scientists are visiting today to flood affected areas Madenadu, Jodupala, Sampaje Team of 4 scientists will visit the locations where the problem is.
Story first published: Wednesday, August 22, 2018, 10:02 [IST]