ಕಡಬ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ವೃದ್ಧ ಆಸ್ಪತ್ರೆಗೆ ದಾಖಲು
ಮಂಗಳೂರು, ಏಪ್ರಿಲ್ 22:ಪೊಲೀಸ್ ಸಿಬ್ಬಂದಿಯಿಂದ ತೀವ್ರ ಹಲ್ಲೆಗೊಳಗಾದ ಮಾನಸಿಕ ಅಸ್ವಸ್ಥ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದೌರ್ಜನ್ಯ ನಡೆಸಿದ ಕಡಬ ಪೋಲೀಸ್ ಸಿಬ್ಬಂದಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಅಕ್ರೋಶ ವ್ಯಕ್ತವಾಗುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಲ್ಲೆಗೊಳಗಾದ ವೃದ್ಧನನ್ನು ರಾಮಣ್ಣ ಗೌಡ ಎಂದು ಗುರುತಿಸಲಾಗಿದ್ದು, ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಮಾನವೀಯ ಘಟನೆಯನ್ನು ಸಾರ್ವಜನಿಕರು ಖಂಡಿಸಿದ್ದು ವೃದ್ಧನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಪಂಪಾಪತಿಯ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ನೀತಿ ತಂಡದವರು ನಿರ್ಧರಿಸಿದ್ದಾರೆ.
ಕಡಬ
ಜಾತ್ರೆಯ
ಪ್ರಯುಕ್ತ
ದೇವರ
ಮೆರವಣಿಗೆ
ಕಡಬ
ಪೇಟೆಯ
ಮುಖ್ಯ
ರಸ್ತೆಯಲ್ಲಿ
ಸಾಗುತ್ತಿದ್ದ
ವೇಳೆ
ಈ
ಘಟನೆ
ನಡೆದಿತ್ತು.
ಮಾನಸಿಕ
ಅಸ್ವಸ್ಥ
ವೃದ್ಧ
ವ್ಯಕ್ತಿ
ಯಾರಿಗೋ
ಬೈಯ್ಯುತ್ತ
ಕೈಯಲ್ಲಿ
ಕಲ್ಲು
ಹಿಡಿದುಕೊಂಡಿದ್ದ
ಎನ್ನುವ
ಕಾರಣಕ್ಕೆ
ಆತನನ್ನು
ಲಾಠಿಯಿಂದ
ಹೊಡೆದು
ಬಿರು
ಬಿಸಿಲಿನಲ್ಲಿ
ನೆಲಕ್ಕೆ
ಕೆಡವಿ
ಕಾಲಿನಿಂದ
ತುಳಿದಿದ್ದು,
ಇದು
ಸ್ಥಳೀಯರ
ಆಕ್ರೋಶಕ್ಕೆ
ಕಾರಣವಾಗಿತ್ತು.
ಈ
ಕುರಿತ
ವೀಡಿಯೋ
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆಗಿತ್ತು.