ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದ ಬಗ್ಗೆ ಹಿಂದೊಮ್ಮೆ ಅಪಚಾರ ಮಾಡಿದ್ದೇನೆ: ಕುಮಾರಸ್ವಾಮಿ

|
Google Oneindia Kannada News

ಮಂಗಳೂರು, ಫೆಬ್ರವರಿ 09: 'ಧರ್ಮಸ್ಥಳದ ವಿಷಯದಲ್ಲಿ ಹಿಂದೊಮ್ಮೆ ನಾನು ಅಪಚಾರ ಮಾಡಿದ್ದೇನೆ' ಎಂದು ಕುಮಾರಸ್ವಾಮಿ ಅವರು ಆಣೆ ಪ್ರಮಾಣದ ವಿಷಯ ನೆನಪಿಸಿಕೊಂಡು ಆತ್ಮನಿವೇದನೆ ಮಾಡಿಕೊಂಡರು.

ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭ ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭ

ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಜನಪ್ರತಿನಿಧಿಗಳು ಕೆಲವೊಂದು ರಾಜಕೀಯ ವಿಚಾರ ಸಂಬಂಧಿಸಿ ಅಪಚಾರ ನಡೆಸಿದ್ದೇವೆ ಎಂದು ತೆರೆದ ಮನಸ್ಸಿನಿಂದ ಮತನಾಡಿದರು.

ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ

ಅಪಚಾರ ನಡೆಸಿದರೆ ಯಾವ ಸ್ಥಾನದಲ್ಲಿದ್ದರೂ ಮಂಜುನಾಥ ಸ್ವಾಮಿ ಬಿಡುವುದಿಲ್ಲ, ಮಂಜುನಾಥ ಸ್ವಾಮಿಯ ಜತೆ ಯಾರೂ ಚೆಲ್ಲಾಟವಾಡಬಾರದು ಎಂದು ನನಗೂ ಅನುಭವವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

I did mistake once in Dharmasthala Manjunatha Swamy matter: Kumaraswamy

ಸಿಎಂ ಕುಮಾರಸ್ವಾಮಿ ಹಾಗೂ ಸಚಿವರುಗಳಿಗೆ ಸನ್ಮಾನ ಮಾಡಿದ ಪೇಜಾವರ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪೇಜಾವರ ಶ್ರೀಗಳು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮತ್ತೆ ಆಣೆ ಪ್ರಮಾಣದ ನೆನಪು ತಂದ ಧರ್ಮಸ್ಥಳದ ಮಂಜುನಾಥ ಮತ್ತೆ ಆಣೆ ಪ್ರಮಾಣದ ನೆನಪು ತಂದ ಧರ್ಮಸ್ಥಳದ ಮಂಜುನಾಥ

ಮಧ್ಯಮ ಬಡ ವರ್ಗಕ್ಕೆ ಕುಮಾರಸ್ವಾಮಿ ಉತ್ತಮ ಕೊಡುಗೆ ನೀಡಿದ್ದಾರೆ, ರಾಜ್ಯದ ಅಭವೃದ್ಧಿ ಚೆನ್ನಾಗಿ ನಡೆಸಲಿ, ಆಧ್ಯಾತ್ಮಿಕ ಹಾಗೂ ಕೃಷಿ ಕ್ಷೇತ್ರಕ್ಕೂ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಪೇಜಾವರ ಅವರು ಹೇಳಿದರು.

English summary
I did mistake in Dharmasthala Manjunatha Swamy matter says CM Kumaraswamy. He talking about the oath issue happend between Kumaraswamy and Yeddyurappa some years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X