ಪುತ್ತೂರು; ಹನಿಟ್ರ್ಯಾಪ್ ಜಾಲ ಬಯಲು, ಯುವತಿ ಬಂಧನ
ಮಂಗಳೂರು, ಜುಲೈ 04; ಯುವಕನನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿ, 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಯುವತಿಯನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡದಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಚೀಚಗದ್ದೆ ಇಬ್ರಾಹಿಂ ಪುತ್ರ ಅಬ್ದುಲ್ ನಾಸೀರ್ ಹೈಟೆಕ್ ಹನಿಟ್ರ್ಯಾಪ್ಗೆ ಒಳಗಾದ ಯುವಕ. ಪುತ್ತೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಅಬ್ದುಲ್ ನಾಸೀರ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಮೂಲದ ತನಿಶಾ ಎಂಬಾಕೆಯ ಪರಿಚಯವಾಗಿತ್ತು.
ಲೊಕಾಂಟೋ ಕಾಲ್ ಗರ್ಲ್ ಸರ್ವೀಸ್ ಹೆಸರಿನಲ್ಲಿ ಹನಿಟ್ರ್ಯಾಪ್ !
ಪರಿಚಯವಾದ ಕೆಲವೇ ದಿನಗಳಲ್ಲಿ ಇಬ್ಬರೂ ಕಾಮದಾಟಕ್ಕೆ ಕೈ ಹಾಕಿದ್ದಾರೆ. ಅರೆನಗ್ನ ಸ್ಥಿತಿಯಲ್ಲಿ ವಿಡಿಯೋ ಕಾಲ್ ಮಾಡಿದ್ದು, ಈ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ತನಿಶಾ ದಾಖಲಿಸಿಕೊಂಡಿದ್ದು, ಆನಂತರ ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ.
ಹನಿಟ್ರ್ಯಾಪ್ ಜಾಲ; ಹೆದರದೇ ಮಾಹಿತಿ ನೀಡಿ ಎಂದ ಡಿಸಿಪಿ
ದಿನ ಕಳೆಯುತ್ತಿದ್ದಂತೆಯೇ ಯುವತಿ ಮತ್ತು ಆಕೆಯ ಸಹಚರರ ಬೆದರಿಕೆ ಜಾಸ್ತಿಯಾಗಿದ್ದು, ಕೊನೆಗೆ ಯುವಕ ಅಬ್ದುಲ್ ನಾಸೀರ್ ಪುತ್ತೂರು ಗ್ರಾಮಾಂತರ ಠಾಣಾ ಮೆಟ್ಟಿಲೇರಿದ್ದಾನೆ. ಪುತ್ತೂರು ಪೊಲೀಸರು ತನಿಶಾಳನ್ನು ಬಂಧಿಸಿದ್ದು, ಆಕೆಯ ಆರು ಮಂದಿ ಸಹಚರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಮೈಸೂರಿನಲ್ಲಿ ಶ್ರೀಮಂತರ ಹನಿಟ್ರ್ಯಾಪ್ ಜಾಲ; ಐವರ ಬಂಧನ
ನೆಟ್ಟಣಿಗೆ ಮುಡ್ನೂರು ಚೀಚಗದ್ದೆತ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯಿದ್ ಮೋನು ಮತ್ತು ನಾಸೀರ್ ಎಂಬುವವರಿಗೆ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ.
ಏಪ್ರಿಲ್12ರಂದು ಹನಿಟ್ರ್ಯಾಪ್ ಘಟನೆ ನಡೆದಿದ್ದು, ಉನ್ನತ ಅಧಿಕಾರಿಗಳ ಸೂಚನೆಯಂತೆ ಈಗ ಸಂತ್ರಸ್ತ ಯುವಕ ನಾಸೀರ್, ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.