ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ರೈಲ್ವೇ ಹಳಿ ಮೇಲೆ ಗುಡ್ಡ ಕುಸಿತ
ಮಂಗಳೂರು, ಜುಲೈ 16: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ಮಂಗಳೂರು ನಗರ ಭಾಗದಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ.
ರೈಲು ಹಳಿ ಮೇಲೆ ಮಣ್ಣು ಕುಸಿದು ರೈಲು ಸಂಚಾರ ಬಂದ್ ಆಗಿರುವ ಘಟನೆ ಮಂಗಳೂರು ಜಂಕ್ಷನ್ ಮತ್ತು ತೋಕೂರು ರೈಲ್ವೇ ನಿಲ್ದಾಣ ಮಧ್ಯೆ ನಡೆದಿದೆ.
ಮಂಗಳೂರು ಹೊರವಲಯದ ಕುಲಶೇಖರ ಟನಲ್ ಬಳಿ ಹಳಿಗೆ ಮಣ್ಣು ಕುಸಿತವಾಗಿದ್ದು, ಕೊಂಕಣ್ ರೈಲ್ವೇ ವಿಭಾಗದ ರೈಲು ಸಂಚಾರ ವ್ಯತ್ಯಯವಾಗಿದೆ. ಮಂಗಳೂರು ಹಾಗೂ ಮುಂಬೈ ಮಧ್ಯೆ ಸಂಚರಿಸುವ ರೈಲಿಗೆ ತಾತ್ಕಾಲಿಕ ತಡೆಯಾಗಿದೆ.
ರೈಲ್ವೇ ಇಲಾಖಾ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಕೊಡಲಿದ್ದು, ಮಣ್ಣು ತೆರವು ಕಾರ್ಯ ಆರಂಭವಾಗಿದೆ.
ಜುಲೈ 19ರವರೆಗೆ ಕರಾವಳಿಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ಮೈದುಂಬಿ ಹರಿಯುತ್ತಿವೆ.
Comments
mangaluru dakshina kannada rain heavy rain indian railways landslide karnataka ಮಂಗಳೂರು ದಕ್ಷಿಣ ಕನ್ನಡ ಮಳೆ ಭಾರತೀಯ ರೈಲ್ವೆ ಭೂಕುಸಿತ ಕರ್ನಾಟಕ
English summary
Heavy rains have continued across Dakshina Kannada district and Mangaluru city, including rural parts of the district, has been torrential.
Story first published: Friday, July 16, 2021, 15:34 [IST]