ಕೂಳೂರಿನ ಕಮಾನು ಸೇತುವೆ ಮೇಲೆ ಬೃಹತ್ ವಾಹನ ಸಂಚಾರ ನಿಷೇಧ
ಮಂಗಳೂರು, ಜೂನ್ 6: ಮಂಗಳೂರು ನಗರ ಪ್ರವೇಶಿಸುವ ಕಮಾನು ಸೇತುವೆ ಮೇಲೆ ಬೃಹತ್ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಕೂಳೂರಿನ ಈ ಹಳೇ ಕಮಾನು ಶಿಥಿಲಾವಸ್ಥೆಯಲ್ಲಿರುವ ಕಾರಣ ಬೃಹತ್ ವಾಹನಗಳನ್ನು ನಿರ್ಬಂಧಿಸಲಾಗಿದೆ. ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗುವವರೆಗೂ ಬದಲಿ ಮಾರ್ಗ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯಲು ಒಂದರಿಂದ ಎರಡು ವರ್ಷ ಕಾಲಾವಧಿ ಅಗತ್ಯವಿದೆ ಎನ್ನಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ವಿಭಾಗದ ಈಗಾಗಲೆ ಸ್ಪಷ್ಟನೆ ನೀಡಿದೆ. ಹೊಸ ಸೇತುವೆ ಕಾಮಗಾರಿ ಮುಗಿಯುವ ತನಕ ಬೃಹತ್ ವಾಹನಗಳು ಬದಲಿ ಮಾರ್ಗಗಳಲ್ಲಿಯೇ ಸಂಚರಿಸಲು ಸೂಚನೆ ನೀಡಲಾಗಿದೆ.
ಮಂಗಳೂರು: ಅಪಾಯ ಆಹ್ವಾನಿಸುತ್ತಿರುವ ಹೊಸಮಠ ಸೇತುವೆ!
ಭೂ ಸಾರಿಗೆ ಸಚಿವಾಲಯದ ನಿರ್ದೇಶನ ಅನ್ವಯ ಹೈದರಾಬಾದ್ನ ಆರ್ವಿ ಅಸೋಸಿಯೇಟ್ಸ್ ಎಂಬ ಖಾಸಗಿ ಸಂಸ್ಥೆ ಕೂಳೂರು ಸೇತುವೆ ಸ್ಥಿತಿ ಪರಿಶೀಲಿಸಿ ಬೃಹತ್ ವಾಹನಗಳ ಸಂಚಾರಕ್ಕೆ ಅಯೋಗ್ಯ ಎಂದು ಈ ಹಿಂದೆಯೇ ವರದಿ ನೀಡಿತ್ತು. ಬಳಿಕ ಭಾರತ್ಮಾಲಾ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿದ ತಜ್ಞರ ತಂಡ ಕೂಡ ಹಳೇ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದೆ.
ಶಿಥಿಲಾವಸ್ಥೆಯಲ್ಲಿರುವ ಈ ಕೂಳೂರು ಸೇತುವೆಗೆ 66 ವರ್ಷಗಳ ಇತಿಹಾಸವಿದೆ. 1952ರ ಸೆಪ್ಟೆಂಬರ್.21ರಂದು ಕೂಳೂರು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿತ್ತು. 66 ವರ್ಷದ ಹಿಂದೆ 600 ಅಡಿ ಉದ್ದದ ಈ ಸೇತುವೆಯನ್ನು ಮದ್ರಾಸ್ ಪ್ರಾಂತ್ಯದ ಸಾರ್ವಜನಿಕ ಕಾರ್ಯ ವಿಭಾಗದ ಸಚಿವ ಎನ್.ರಂಗರೆಡ್ಡಿ ಉದ್ಘಾಟಿಸಿದ್ದರು.
ಮಂಗಳೂರು: ಮೂರು ಸೇತುವೆಗಳು ಸಂಚಾರಕ್ಕೆ ಅನರ್ಹ
ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್ ಪಿಎಲ್ ಅಥವಾ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್ ಗಳು ಪಡುಬಿದ್ರಿ- ಕಾರ್ಕಳ- ಗುರುವಾಯನಕೆರೆ- ಧರ್ಮಸ್ಥಳ - ಕೊಕ್ಕಡ- ಪೆರಿಯಶಾಂತಿ ಮೂಲಕ ಸಂಚರಿಸುವವು. ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್ ಗಳು ಕೆ.ಪಿ.ಟಿ.ಯಿಂದ ಕಾವೂರು- ಬಜ್ಪೆ- ಕಾನ - ಸುರತ್ಕಲ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.