ಮಂಗಳೂರು : ಕುಮಾರಧಾರ ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್
ಮಂಗಳೂರು, ಆಗಸ್ಟ್ 09 : ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಸಾಗಣೆ ಮಾಡುತ್ತಿದ್ದ ಎಚ್ಪಿಸಿಎಲ್ ಕಂಪನಿಗೆ ಸೇರಿದ ಟ್ಯಾಂಕರ್ ಕುಮಾರಧಾರಾ ನದಿಗೆ ಬಿದ್ದಿದೆ. ಟ್ಯಾಂಕರ್ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಆತಂಕ ಸೃಷ್ಟಿಯಾಗಿದೆ.
ಮಂಗಳವಾರ
ಮಧ್ಯಾಹ್ನ
3
ಗಂಟೆ
ಸುಮಾರಿಗೆ
ಉಪ್ಪಿನಂಗಡಿ
ಬಳಿಯ
ಉದನೆ
ನರ್ಸರಿ
ಬಳಿ
ಚಾಲಕನ
ನಿಯಂತ್ರಣ
ತಪ್ಪಿದ
ಟ್ಯಾಂಕರ್
ನದಿಗೆ
ಉರುಳಿ
ಬಿದ್ದಿದೆ.
ಲಾರಿ
ಸೇತುವೆಗೆ
ಡಿಕ್ಕಿ
ಹೊಡೆಯುವುದನ್ನು
ತಪ್ಪಿಸಲು
ಚಾಲಕ
ಬ್ರೇಕ್
ಹಾಕಿದಾಗ
ಟ್ಯಾಂಕರ್
ನದಿಗೆ
ಉರುಳಿದೆ.[ಅಡುಗೆ
ಅನಿಲ
ಸಿಲಿಂಡರ್
ಬೆಲೆಯಲ್ಲಿ
ಏರಿಕೆ
-ಇಳಿಕೆ]
ಕುಮಾರಧಾರಾ ನದಿಗೆ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೆಲವು ಹೊತ್ತು ನದಿ ನೀರನ್ನು ಉಪಯೋಗಿಸಬಾರದು ಎಂದು ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ಟ್ಯಾಂಕರ್ ಉರುಳಿ ಬಿದ್ದ ಸ್ಥಳದ ಸಮೀಪ ಸರ್ಕಾರಿ ಶಾಲೆ ಇದ್ದು, ಜನರು ಆತಂಕಗೊಂಡಿದ್ದಾರೆ.[ನಗರದ ಬಡ ಕುಟುಂಬಗಳಿಗೆ ಹೆಚ್ಚುವರಿ ಸಿಲಿಂಡರ್]
ಮಂಗಳೂರು, ಪುತ್ತೂರಿನ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಟ್ಯಾಂಕರ್ ಮೇಲೆತ್ತುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್ ಸ್ಥಳಕ್ಕೆ ಧಾವಿಸಿದ್ದಾರೆ.[ಚಿತ್ರಗಳು : ಮಂಗಳೂರಿನಲ್ಲಿ ಟ್ಯಾಂಕರ್ ಪಲ್ಟಿ, ಹೆದ್ದಾರಿ ಬಂದ್]