ಜ್ಯೋತಿ ಸಂಜೀವಿನಿ: ಮಂಗ್ಳೂರಿನ ಯಾವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯ?
ಮಂಗಳೂರು, ಏಪ್ರಿಲ್ 17 : ಬಿಪಿಎಲ್ ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯಶ್ರೀ, ಎಪಿಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯ ಭಾಗ್ಯ, ಸರಕಾರಿ ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆ ಸುವರ್ಣಾ ಅರೋಗ್ಯ ಸುರಕ್ಷಾ ಟ್ರಸ್ಟ್ ಅನುಷ್ಠಾನಗೊಳಿಸುತ್ತಿದೆ.
ಹೃದ್ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಸುಟ್ಟಗಾಯ, ಅಪಘಾತ(ಮೋಟಾರ್ ವಾಹನ ಕಾಯಿದೆಯಡಿಯಲ್ಲಿ ಒಳಗೊಳ್ಳದ ಪ್ರಕರಣಗಳು), ನವಜಾತ ಶಿಶುಗಳಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳಿಗೆ ಉಚಿತವಾಗಿ ಒಡಂಬಡಿಕೆ ಹೊಂದಿದ ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಮೂರೂ ಯೋಜನೆಗಳೊಂದಿಗೆ ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಪರಿಷ್ಕೃತ ಪಟ್ಟಿ ಇಲ್ಲಿದೆ.
* ಫಾದರ್ ಮುಲ್ಲರ್ ಆಸ್ಪತ್ರೆ, ಕಂಕನಾಡಿ ಮತ್ತು ಕೆ. ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ - ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು.
* ಗ್ಲೋಬಲ್ ಆಸ್ಪತ್ರೆ, ಮಣ್ಣಗುಡ್ಡ - ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಅಪಘಾತ, ಸುಟ್ಟಗಾಯಕ್ಕೆ ಚಿಕಿತ್ಸೆ.
*
ಕೆಎಂಸಿ
ಆಸ್ಪತ್ರೆ,
ಅತ್ತಾವರ
-
ಕ್ಯಾನ್ಸರ್,
ಮೂತ್ರಪಿಂಡದ
ಕಾಯಿಲೆ,
ನವಜಾತ
ಶಿಶುಗಳ
ಶಸ್ತ್ರಚಿಕಿತ್ಸೆ,
ಅಪಘಾತ.
*
ಜಿಲ್ಲಾ
ವೆನ್ಲಾಕ್
ಆಸ್ಪತ್ರೆ,
ಮಂಗಳೂರು
-
ಮೂತ್ರಪಿಂಡದ
ಕಾಯಿಲೆ,
ನರರೋಗ,
ನವಜಾತ
ಶಿಶುಗಳ
ಶಸ್ತ್ರಚಿಕಿತ್ಸೆ,
ಕ್ಯಾನ್ಸರ್,
ಅಪಘಾತ,
ಸುಟ್ಟಗಾಯಕ್ಕೆ
ಚಿಕಿತ್ಸೆ.
*
ಯೆನೆಪೋಯ
ಆಸ್ಪತ್ರೆ,
ದೇರಳಕಟ್ಟೆ
-
ನರರೋಗ,
ಮೂತ್ರಪಿಂಡದ
ಕಾಯಿಲೆ,
ನವಜಾತ
ಶಿಶುಗಳ
ಶಸ್ತ್ರಚಿಕಿತ್ಸೆ,
ಕ್ಯಾನ್ಸರ್,
ಅಪಘಾತ.
*
ಯೆನೆಪೋಯ
ಆಸ್ಪತ್ರೆ,
ಕೊಡಿಯಾಲ್
ಬೈಲ್
-
ಹೃದ್ರೋಗ
ಮತ್ತು
ಮೂತ್ರಪಿಂಡದ
ಕಾಯಿಲೆ.
*
ಒಮೇಗಾ
ಆಸ್ಪತ್ರೆ
ಪಂಪ್ವೆಲ್
-
ಹೃದಯ
ರೋಗ,
ನರರೋಗ
,
ಮೂತ್ರಪಿಂಡ
ಕಾಯಿಲೆ
*
ಕಣಚೂರ್
ಆಸ್ಪತ್ರೆ
-
ಮೂತ್ರಪಿಂಡದ
ಕಾಯಿಲೆ
ಮತ್ತು
ಅಪಘಾತದ
ಚಿಕಿತ್ಸೆ,
ನವಜಾತ
ಶಿಶುಗಳ
ಶಸ್ತ್ರಚಿಕಿತ್ಸೆ.
*
ಪ್ರಗತಿ
ಆಸ್ಪತ್ರೆ,
ಪುತ್ತೂರು
-
ಮೂತ್ರಪಿಂಡದ
ಕಾಯಿಲೆ,
ಸುಟ್ಟಗಾಯ
ಮತ್ತು
ಅಪಘಾತದ
ಚಿಕಿತ್ಸೆ.
*
ಎಂಐಓ
ಆಸ್ಪತ್ರೆ,
ಪಂಪ್ವೆಲ್
-
ಕ್ಯಾನ್ಸರ್
ಚಿಕಿತ್ಸೆ.
*
ಕೆಎಂಸಿ
ಜ್ಯೋತಿ
ಸರ್ಕಲ್
-
ಹೃದಯ
ರೋಗಕ್ಕೆ
ಚಿಕಿತ್ಸೆ.
ಹೆಚ್ಚಿನ ಮಾಹಿತಿಗಾಗಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ , ಜಿಲ್ಲಾ ಆಸ್ಪತ್ರೆ ಮತ್ತು ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.