'ಸಮಾನತೆಗೆ ಸಮುದಾಯ ಶ್ರಮಿಸಿದರೆ ದೇವರ ಪ್ರೀತಿ ಗಳಿಸಬಹುದು'
ಮಂಗಳೂರು, ಡಿಸೆಂಬರ್ 26 : ಸಮಾಜದಲ್ಲಿ ಸಮಾನತೆ ಕಂಡುಕೊಳ್ಳುವಲ್ಲಿ ಸಮುದಾಯ ಶ್ರಮಿಸಿದರೆ ದೇವರ ಪ್ರೀತಿ ಗಳಿಸಬಹುದು ಎಂದು ಮಾಜಿ ಲೋಕಾಯುಕ್ತ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ಹಿದಾಯ ಫೌಂಡೇಶನ್ ವತಿಯಿಂದ ಕಾವಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯ ಶೇರ್ ಆಂಡ್ ಕೇರ್ ಕಾಲೋನಿಗೆ ಭೇಟಿ ನೀಡಿ ಮಾತನಾಡಿ, ಆರೋಗ್ಯ, ವಸತಿ, ಶಿಕ್ಷಣಕ್ಕೆ ಸಂಬಂಧಿಸಿ ವಿಶಿಷ್ಟ ಸೇವೆ ಸಲ್ಲಿಸುವ ಈ ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿದಾಯ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸರಳ ವ್ಯಕ್ತಿತ್ವ ಮೈಗೂಡಿಸಿಕೊಂಡಿರುವ ಸಂತೋಷ್ ಹೆಗ್ಡೆ ಸ್ಫೂರ್ತಿದಾಯಕ ವ್ಯಕ್ತಿ ಎಂದರು.
ಕಾರ್ಯಕ್ರಮದಲ್ಲಿ ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಹಿದಾಯ ಸದಸ್ಯರಾದ ಬೆಳ್ಳಿಚಾರ್ ಮುಹಮ್ಮದ್, ಕೆ.ಎಸ್. ಅಬೂಬಕರ್, ಹಸನ್, ಝಹೀರ್ , ರಶೀದ್ ಕಕ್ಕಿಂಜೆ, ಲೆಕ್ಕ ಪರಿಶೋಧಕ ಜಸೀಮ್, ಶಹೀಮ್, ವಿಕಲ ಚೇತನ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಉಪಸ್ಥಿತರಿದ್ದರು.