ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9.8 ಲಕ್ಷ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ
ಮಂಗಳೂರು, ಮೇ. 20: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೀರಿನ ಮೂಲಗಳು ಬರಿದಾಗುತ್ತಿವೆ. ಅಂತರ್ಜಲದ ಮಟ್ಟ ಕುಸಿದಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡು ನಾಶದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 950 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಸುಮಾರು 9.8 ಲಕ್ಷ ಗಿಡ ನೆಟ್ಟು ಬೆಳೆಸುವ ಗುರಿಯನ್ನು ಅರಣ್ಯ ಇಲಾಖೆ ಇರಿಸಿಕೊಂಡಿದೆ.
ಬಂಡೀಪುರ ಹಸಿರಾಗಿಸಲು ಬೃಹತ್ ಬಿತ್ತನೆ ಕಾರ್ಯ ಆರಂಭ
ರಸ್ತೆ ಬದಿ ಪ್ಲಾಂಟಿಂಗ್ ಮತ್ತು ಗ್ರೀನಿಂಗ್ ಅರ್ಬನ್ ಏರಿಯಾ ಯೋಜನೆಯಡಿ ಜಿಲ್ಲೆಯ 60 ಕಿ.ಮೀ. ವ್ಯಾಪ್ತಿಯಲ್ಲಿ ಗಿಡ ನೆಡಲಾಗುತ್ತದೆ. ಅಲ್ಲದೇ, ಈ ಬಾರಿ ರೈನ್ ಟ್ರೀ, ದೇವದಾರು ಗಿಡಗಳನ್ನು ನೆಡದಿರಲು ತೀರ್ಮಾನ ಮಾಡಿದೆ. ಇವು ದುರ್ಬಲ ಮರಗಳಾಗಿದ್ದು, ಗಾಳಿಗೆ ತುಂಡಾಗುತ್ತದೆ. ಇದೇ ಕಾರಣಕ್ಕೆ ಒಣ ವಲಯಗಳಲ್ಲಿ ಗೋಳಿ, ಅರಳಿ ಗಿಡ ನೆಡುವ ಯೋಚನೆ ಇಲಾಖೆಗಿದೆ.
ಈ ಬಾರಿ ಮಳೆ ಬಂದ ಬಳಿಕ ಜೂನ್ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ 8 ವಲಯಗಳಲ್ಲಿ ಗಿಡ ನೆಡಲು ಪ್ರಾರಂಭ ಮಾಡಲಾಗುತ್ತದೆ. ಒಂದು ತಿಂಗಳು ಕಾಲ ಈ ಕಾರ್ಯ ನಡೆಯಲಿದೆ. ರಸ್ತೆ ಬದಿಗಳಲ್ಲಿಯೂ ಗಿಡ ನೆಡುವುದು ಈ ಯೋಜನೆಯಲ್ಲಿದ್ದು, ಜಿಲ್ಲೆಯ ಸುಮಾರು 60 ಕಿ.ಮೀ. ರಸ್ತೆ ಬದಿ ನೆಡಲಾಗುತ್ತದೆ. ಪ್ರತಿ ಕಿ.ಮೀ.ಗೆ 300 ಗಿಡ ನೆಡುವ ಗುರಿಯನ್ನು ಇಲಾಖೆ ಹೊಂದಿದೆ.