ವಾಯುಭಾರ ಕುಸಿತ; ಮಂಗಳೂರಿನಲ್ಲಿ ಜೂನ್ 4ರವರೆಗೆ ಮೀನುಗಾರಿಕೆ ನಡೆಸದಂತೆ ಸೂಚನೆ
ಮಂಗಳೂರು, ಮೇ 30: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮೇ 31 ರಿಂದ ಜೂನ್ 4 ರವರೆಗೆ ಅರಬ್ಬಿ ಸಮುದ್ರದ ಆಗ್ನೇಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿತವಾಗುವ ಸಂಭವವಿರುವುದರಿಂದ ಜೂ 4 ರವರೆಗೂ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆ ನಿರ್ದೇಶನ ನೀಡಿದೆ.
Recommended Video
ಗಾಂಧೀಜಿ
ಬಳಿ
ಹೋಗಿ
ಪ್ರಶ್ನೆ
ಕೇಳಿದ
ಮಂಗಳೂರಿನ
ಯುವಕ..!
|
Mangalore
|
Mahatma
Gandhi
ವಾಯುಭಾರ ಕುಸಿತದಿಂದ ಸಮುದ್ರವು ಪ್ರಕ್ಷುಬ್ಧವಾಗುವುದರಿಂದ ಆಗಬಹುದಾದ ಅವಘಡವನ್ನು ತಡೆಯುವ ಸಲುವಾಗಿ ಈ ನಿರ್ದೇಶನವನ್ನು ನೀಡಿರುವುದಾಗಿ ಇಲಾಖೆ ತಿಳಿಸಿದೆ.
ಮೀನುಗಾರರ ಸಾಲಮನ್ನಾ ಯೋಜನೆಗೆ 60 ಕೋಟಿ ರೂ ಬಿಡುಗಡೆ
ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ ಎಂದು ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
Comments
English summary
The Fisheries Department has issued a directive not to continue fishing until June 4 as forecast of Department of Meteorology
Story first published: Saturday, May 30, 2020, 20:20 [IST]