ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತ

|
Google Oneindia Kannada News

ಮಂಗಳೂರು, ಆಗಸ್ಟ್ 18: ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತಪಟ್ಟ ಘಟನೆ ಕಾಸರಗೋಡು ನೀರ್ಚಾಲುನಲ್ಲಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಅಹ್ಮದ್ ಹಫೀಝ್(8) ಎಂದು ಗುರುತಿಸಲಾಗಿದ್ದೆ. ಹಫೀಝ್ ಕಳೆದ ನಾಲ್ಕೂವರೆ ವರ್ಷಗಳಿಂದ ಈ ರೋಗಕ್ಕೆ ತುತ್ತಾಗಿದ್ದ ಎನ್ನಲಾಗಿದೆ.

ಹಫೀಝ್ ತಲೆಯ ರಕ್ತನಾಳದಲ್ಲಿ ಅಡಚಣೆಯಿರುವುದು ವೈದ್ಯಕೀಯ ತಪಾಸಣೆಯ ವೇಳೆ ತಿಳಿದುಬಂದಿತ್ತು, ಇದರ ನಿವಾರಣೆಗಾಗಿ ನಾಲ್ಕು ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೂ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿರಲಿಲ್ಲ.

Endosulfan victim of age 8 breathes his last at Kasargod

ಬಾಲಕನ ಚಿಕಿತ್ಸೆಗಾಗಿ ಹೆತ್ತವರು ಭಾರೀ ಮೊತ್ತ ವ್ಯಯಿಸಿದ್ದು ಅಲ್ಲದೆ ವಿವಿಧ ಸಂಘ-ಸಂಸ್ಥೆಗಳು ನೆರವು ನೀಡಿದ್ದವು. ಇತ್ತೀಚೆಗೆ ಮುಳ್ಳೇರಿಯ-ಬದಿಯಡ್ಕ-ಸ್ವರ್ಗ ರೂಟ್ ನಲ್ಲಿ ಹೊಸದಾಗಿ ಸಂಚಾರ ಆರಂಭಿಸಿದ ನವದುರ್ಗಾ ಬಸ್‌ನ ಮೊದಲ ದಿನದ ಸಂಗ್ರಹ ಹಾಗೂ ಕಾಞಂಗಾಡ್-ಪಾಣತ್ತೂರು ರೂಟ್‌ನಲ್ಲಿ ಸಂಚರಿಸುವ ಮೂಕಾಂಬಿಕಾ ಬಸ್‌ನ ಒಂದು ದಿನದ ಕಲೆಕ್ಷನ್ ಹಣವನ್ನು ಈ ಬಾಲಕನಿಗೆ ಚಿಕಿತ್ಸೆಗಾಗಿ ನೀಡಲಾಗಿತ್ತು.

ಜುಲೈಯಲ್ಲಿ ನಡೆದ ಎಂಡೋಸಲ್ಫಾನ್ ಶಿಬಿರದಲ್ಲಿ ಬಾಲಕನನ್ನು ತಪಾಸಣೆ ನಡೆಸಲಾಗಿತ್ತು. ಬಳಿಕ ಬದಿಯಡ್ಕ ಪಂಚಾಯತ್‌ನ ಎರಡನೆ ವಾರ್ಡ್ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಅಹ್ಮದ್ ಹಫೀಝ್ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು.

English summary
Endosulfan victim of age 8 from Kasargod breathes his last here on Aug 18. The deceased is identified as Ahmed (8). It is said that he was a Endo Victim for the last 4 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X