ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

350 ವರ್ಷ ಹಳೆಯ ದುರ್ಗಾಪರಮೇಶ್ವರಿ ದೇವಾಲಯ ಪುನರ್ ಪ್ರತಿಷ್ಠೋತ್ಸವ

|
Google Oneindia Kannada News

ಮಂಗಳೂರು, ಜನವರಿ 11: ಮಂಗಳೂರು ಹೊರವಲಯದ ಕುಲಶೇಖರ ಸಮೀಪ ಇರುವ ಇತಿಹಾಸ ಪ್ರಸಿದ್ಧ ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠೋತ್ಸವ ಮತ್ತು ಬ್ರಹ್ಮಕಲಶೋತ್ಸವ ಜನವರಿ 14 ರಿಂದ 18ರವರೆಗೆ ನಡೆಯಲಿದೆ.

'ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ''ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ'

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಕೆಎನ್ ಬಿಎಂ ಟ್ರಸ್ಟ್ ನ ಟ್ರಸ್ಟಿ ಡಾ.ಸುಬ್ರಹ್ಮಣ್ಯ ಭಟ್, ಕೊಂಗೂರು ಮಠ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಸುಮಾರು 350 ವರ್ಷಗಳಷ್ಟು ಪುರಾತನವಾಗಿದ್ದು ಬಹಳ ಪ್ರಸಿದ್ಧಿ ಪಡೆದಿದೆ. ಸರಳ ಮಣ್ಣಿನ ಗೋಡೆಯುಳ್ಳ ಈ ದೇವಸ್ಥಾನವು ಭಕ್ತರ ನಂಬುಕೆಯ ತಾಣವಾಗಿದೆ.

 ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಮೊಬೈಲ್ ಬಳಕೆ ನಿಷೇಧ ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಮೊಬೈಲ್ ಬಳಕೆ ನಿಷೇಧ

ಸಸ್ಯ ಸಮೃದ್ಧಿಯಾದ, ನಾಗ ಸನ್ನಿಧಿಯಾದ ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ , ರಕ್ತೇಶ್ವರಿ ದೈವ ಮತ್ತು ಗುಳಿಗ ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕವಾಗಿದೆ ಎಂದು ಹೇಳಿದರು.

Duragaparameshwari temple s Brahrmma kalash program going to be held on January 14

ಶ್ರೀ ಕ್ಷೇತ್ರವನ್ನು ಭಕ್ತರ ಆಭಿಪ್ರಾಯ ಮತ್ತು ಆಶಯದ ಆಧಾರದ ಮೇಲೆ ದೇವಾಲಯದ ಜೀರ್ಣೋದ್ದಾರ ನಡೆಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2011 ನೇ ಫೇಬ್ರವರಿಯಲ್ಲಿ ಭಕ್ತರ ಉಪಸ್ಥಿತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಶ್ರೀ ಬಿ ರಂಗನಾರಾಯಣ ಭಟ್ ಅವರಿಂದ ಅಷ್ಟ ಮಂಗಳ ಪ್ರಶ್ನೆ ವ್ಯವಸ್ಥೆ ಮಾಡಲಾಗಿತ್ತು.

 ಉಡುಪಿ: ಪ್ರಸಾದದ ಬಗ್ಗೆ ಎಚ್ಚರ ವಹಿಸಲು ದೇವಾಲಯಗಳಿಗೆ ಸೂಚನೆ ಉಡುಪಿ: ಪ್ರಸಾದದ ಬಗ್ಗೆ ಎಚ್ಚರ ವಹಿಸಲು ದೇವಾಲಯಗಳಿಗೆ ಸೂಚನೆ

ಜ್ಯೋತಿಷಿಯವರಿಂದ ಅಷ್ಟಮಂಗಳ ಪ್ರಶ್ನೆಯಲ್ಲಿ ಪಡೆದ ನಿರ್ದೇಶನಗಳಂತೆ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. 2013 ರಲ್ಲಿ ಶಿಲಾನ್ಯಾಸದೊಂದಿಗೆ ಕೆಲಸ ಪ್ರಾರಂಭಿಸಿ 6 ವರ್ಷಗಳ ದೀರ್ಘ ಪ್ರಯತ್ನ ಗಳೊಂದಿಗೆ ಈಗ ಸುಂದರ ದೇವಸ್ಥಾನ ನಿರ್ಮಾಣ ಕೆಲಸ ಮುಗಿಸಲಾಗಿದೆ.

Duragaparameshwari temple s Brahrmma kalash program going to be held on January 14

ಇದೇ ಬರುವ ಜನವರಿ 14 ರಿಂದ 18 ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಜನವರಿ 18 ರ ಕುಂಭ ಲಗ್ನ ಮುಂಜಾನೆ 8:40 ಕ್ಕೆ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶಗಳು ನಡೆಯಲಿದೆ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಕರವೀರ ಪೀಠದ ಜಗದ್ಗುರು ಶ್ರೀ ವಿದ್ಯಾನರಸಿಂಹ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಡಾ.ಸುಬ್ರಹ್ಮಣ್ಯ ಭಟ್ ತಿಳಿಸಿದರು.

English summary
Mangaluru's very famous Konguru Matt shri Duragaparameshwari temple' s Brahrmma kalash program going to be held on January 14 to 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X