ತಲಪಾಡಿ: ಭಾರಿ ಮಳೆಗೆ ಕುಸಿದ ಶಿಥಿಲಾವಸ್ಥೆಯ ಶಾಲೆ!
ಮಂಗಳೂರು, ಮೇ 19: ಭಾರೀ ಮಳೆಗೆ ಮಂಗಳೂರು ನಗರ ಹೊರವಲಯದ ತಲಪಾಡಿಯ ಕಿನ್ಯಾ ಗ್ರಾಮದ ಬೆಳರಿಂಗೆ ಸ.ಹಿ.ಪ್ರಾ.ಶಾಲೆ ಕಟ್ಟಡ ಕುಸಿದ ಘಟನೆ ನಡೆದಿದೆ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ರಾತ್ರಿ ವೇಳೆ ಕುಸಿದ ಪರಿಣಾಮ ಸಂಭಾವ್ಯ ಅಪಾಯವೊಂದು ತಪ್ಪಿದಂತಾಗಿದೆ.
ಈ ಶಾಲೆಯಲ್ಲಿ 127 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಕಳೆದ ವರ್ಷವೇ ಶಿಕ್ಷಣಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಹಲವಾರು ಬಾರಿ ದೂರು ನೀಡಿದೆ. ಈ ವೇಳೆ ಪರಿಶೀಲನೆಗೆ ಸ್ಥಳಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ನಿತಿನ್ ಎಂಬವರು ಶಾಲಾ ಕಟ್ಟಡ ಗಟ್ಟಿಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ಹೋಗಿದ್ದರು. ಆದರೆ ಇದೀಗ ಶಾಲೆ ಆರಂಭವಾದ ಕೆಲವೇ ದಿನಗಳಲ್ಲಿ ಸುರಿದ ಮಳೆಗೆ ಕಟ್ಟಡ ಸಂಪೂರ್ಣ ಕುಸಿದಿದೆ.
ಬೆಂಗಳೂರಿನಲ್ಲಿ ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಧರಾಶಾಯಿಯಾಗಿದೆ. ಇದೀಗ ಶಾಲೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ತರಗತಿ ನಡೆಸದೆ ಪಕ್ಕದ ಮಸೀದಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಶಾಲೆಗೆ ಕಿನ್ಯಾ ಪಿಡಿಒ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ತೀವ್ರವಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ರಜೆ ಘೋಷಣೆ ಮಾಡಿದ್ದಾರೆ.
ಮಳೆ ಆರ್ಭಟ: ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ
ತುಂಬಿ
ಹರಿಯುತ್ತಿರುವ
ನದಿಗಳು:
ದಕ್ಷಿಣ
ಕನ್ನಡ
ಜಿಲ್ಲೆಯ
ಗ್ರಾಮೀಣ
ಭಾಗಗಳಾದ
ಬೆಳ್ತಂಗಡಿ,
ಸುಳ್ಯ,
ಪುತ್ತೂರು,
ಬಂಟ್ವಾಳ
ತಾಲೂಕಿನಲ್ಲೂ
ಭಾರೀ
ಮಳೆಯಾಗುತ್ತಿದೆ.
ನಿರಂತರ
ಮಳೆಯ
ಹಿನ್ನೆಲೆಯಲ್ಲಿ
ಜಿಲ್ಲೆಯ
ಜೀವನದಿಗಳಾದ
ಕುಮಾರಾಧಾರಾ
ನೇತ್ರಾವತಿ
ನದಿಯಲ್ಲಿ
ನೀರಿನ
ಹರಿವು
ಪ್ರಮಾಣ
ಹೆಚ್ಚಳವಾಗಿದೆ.
ಸಣ್ಣ
ಪುಟ್ಟ
ಹಳ್ಳ-ತೊರೆಗಳಲ್ಲಿ
ನೀರಿನ
ಹರಿವು
ಜಾಸ್ತಿಯಾಗಿದೆ.
ಗ್ರಾಮೀಣ
ಭಾಗದ
ಮಕ್ಕಳಿಗೆ
ಭಾರೀ
ಮಳೆಯಿಂದಾಗಿ
ಶಾಲೆಗೆ
ಹೋಗಲು
ಅನಾನುಕೂಲವಾಗಿದೆ.
ಈ
ಹಿನ್ನೆಲೆಯಲ್ಲಿ
ಶಾಲೆಗಳಿಗೆ
ರಜೆ
ನೀಡಿರುವುದಾಗಿ
ದಕ್ಷಿಣ
ಕನ್ನಡ
ಜಿಲ್ಲಾಧಿಕಾರಿ
ಡಾ.ರಾಜೇಂದ್ರ
ಕೆವಿ
ಹೇಳಿದ್ದಾರೆ.
ಇನ್ನು ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಕುಂದಾಪುರ, ಕಾಪು, ಕಾರ್ಕಳ ಸೇರಿದಂತೆ ಹಲವು ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಮಿನುಗಾರರು ಇನ್ನೂ ಎರಡು ದಿನ ಮೀನುಗಾರಿಕೆಗೆ ಕಡಲಿಗೆ ಇಳಿಯದಂತೇ ಜಿಲ್ಲಾಡಳಿತ ಸೂಚನೆ ನೀಡಿದೆ. ಮಲ್ಪೆ ಕಡಲ ಕಿನಾರೆಯಲ್ಲಿ ಇನ್ನು ಮೂರು ತಿಂಗಳು ವಾಟರ್ ಸ್ಟೋರ್ಟ್ಸ್ ನಿಷೇಧ ಮಾಡುವಂತೆ ಸೂಚನೆ ನೀಡಲಾಗಿದೆ.
Recommended Video