ಬೆಂಗಳೂರು-ಕಾರವಾರ ರಾತ್ರಿ ರೈಲು ಪುನಃ ಆರಂಭಿಸಿ
ಮಂಗಳೂರು, ಮಾರ್ಚ್ 16 : ಬೆಂಗಳೂರು-ಕಾರವಾರ ರಾತ್ರಿ ರೈಲನ್ನು ಪುನಃ ಆರಂಭಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಬೆಂಗಳೂರು-ಕಾರವಾರ-ವಾಸ್ಕೋ ರೈಲು ಆರಂಭವಾದ ಬಳಿಕ ಎರಡು ರೈಲುಗಳ ಸಂಚಾರವನ್ನು ಇಲಾಖೆ ರದ್ದುಗೊಳಿಸಿದೆ.
ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್, "ರೈಲು ನಂಬರ್ 16595/596 ಪರಿಚಯಿಸಿದ್ದು ಕರಾವಳಿ ಭಾಗದ ಜನರಿಗೆ ಭಾಗದ ಜನರಿಗೆ ಸಹಾಯಕವಾಗಿದೆ" ಎಂದು ಹೇಳಿದರು.
ಯಶವಂತಪುರ-ವಾಸ್ಕೋ ರೈಲು ವೇಳಾಪಟ್ಟಿ
"ರೈಲು ನಂಬರ್ 16513/514 ಬೆಂಗಳೂರು-ಕಾರವಾರ-ಬೆಂಗಳೂರು (ಕುಣಿಗಲ್ ಮಾರ್ಗ) ರೈಲು ವಾರದಲ್ಲಿ 4 ದಿನ ಸಂಚಾರ ನಡೆಸುತ್ತಿತ್ತು. ರೈಲು ನಂಬರ್ 16523/524 ಬೆಂಗಳೂರು-ಕಾರವಾಡ-ಬೆಂಗಳೂರು (ಮೈಸೂರು ಮಾರ್ಗ) ವಾರಕ್ಕೆ ಮೂರು ದಿನ ಸಂಚಾರ ನಡೆಸುವ ರೈಲು ಸ್ಥಗಿತಗೊಳಿಸಲಾಗಿದೆ" ಎಂದು ಸಂಸದರು ಹೇಳಿದರು.
ಕರ್ನಾಟಕಕ್ಕೆ ಮೊದಲ ತೇಜಸ್ ರೈಲು; ಮಾರ್ಗ, ವೇಳಾಪಟ್ಟಿ
"ಹೊಸ ರೈಲಿನ ಸಂಚಾರದ ಅವಧಿ ಜನರಿಗೆ ಸಹಾಯಕವಾಗಿಲ್ಲ. ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಕೆಲಸಗಾರರು, ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಆದ್ದರಿಂದ, ರೈಲನ್ನು ಪುನಃ ಆರಂಭಿಸಬೇಕು" ಎಂದು ಒತ್ತಾಯಿಸಿದರು.
ತುಮಕೂರು-ದಾವಣಗೆರೆ ನೇರ ರೈಲು; ಜನರಿಗೆ ಸಿಹಿ ಸುದ್ದಿ
"ಕಳೆದ ಎಂಟು ವರ್ಷಗಳಿಂದ ಬೆಂಗಳೂರು-ಕಾರವಾರ ರೈಲು ಸಂಚಾರ ನಡೆಸುತ್ತಿದೆ. ಜನರು ಈ ರೈಲಿನಲ್ಲಿ ಹೆಚ್ಚಾಗಿ ಸಂಚಾರ ನಡೆಸುತ್ತಿದ್ದರು. ರೈಲು ಸಂಚಾರ ಸ್ಥಗಿತಗೊಳಿಸಿರುವುದು ಜನರಿಗೆ ತೊಂದರೆ ಉಂಟು ಮಾಡಿದೆ" ಎಂದು ಸಂಸದರು ಹೇಳಿದರು.
ಮಾರ್ಚ್ 7ರಿಂದ ರೈಲ್ವೆ ಇಲಾಖೆ ಮಲೆನಾಡು, ಕರಾವಳಿ ಸಂಪರ್ಕಿಸುವ ಯಶವಂತಪುರ-ವಾಸ್ಕೋ ರೈಲು ಸಂಚಾರವನ್ನು ಆರಂಭಿಸಿತ್ತು. ಆದ್ದರಿಂದ, ಬೆಂಗಳೂರು-ಕಾರವಾರ ನಡುವಿನ ರಾತ್ರಿ ರೈಲನ್ನು ಸ್ಥಗಿತಗೊಳಿಸಿತ್ತು.
ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ ನಡುವೆ ಸಂಚಾರ ನಡೆಸುವ ರೈಲು 696 ಕಿ. ಮೀ. ಮಾರ್ಗವನ್ನು 16 ಗಂಟೆಗಳಲ್ಲಿ ಕ್ರಮಿಸಲಿದೆ.