ಬಂಟ್ವಾಳ ಹೊರತುಪಡಿಸಿ ಉಳಿದೆಡೆ ನಿಷೇಧಾಜ್ಞೆ ವಾಪಸ್
ಮಂಗಳೂರು, ಜುಲೈ 21: ಸತತ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದ್ದ ಮಂಗಳೂರಿನಲ್ಲಿ ಬರೋಬ್ಬರಿ 55 ದಿನಗಳ ನಂತರ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದೆ.
ಶರತ್ ಹತ್ಯೆ ಆರೋಪಿಗಳು ಶೀಘ್ರ ಬಂಧನಕ್ಕಾಗಿ ರಮಾನಾಥ್ ರೈ ವಿಶೇಷ ಪೂಜೆ
ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಸಿಆರ್'ಪಿಸಿ ಸೆಕ್ಷನ್ 144ರ ಅನ್ವಯ ಹಾಕಿದ್ದ ನಿಷೇಧಾಜ್ಞೆಯನ್ನು ವಾಪಸ್ ಪಡೆದಿರುವುದಾಗಿ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಆದರೆ ಅತೀ ಹೆಚ್ಚಿನ ಗಲಭೆ ನಡೆದಿದ್ದ ಬಂಟ್ವಾಳದಲ್ಲಿ ಮಾತ್ರ ನಿಷೇಧಾಜ್ಞೆ ಮುಂದುವರಿದಿದೆ. ಬಂಟ್ವಾಳದಲ್ಲಿ ಜುಲೈ 25ರವರೆಗೆ ನಿಷೇಧಾಜ್ಞೆ ಹೇರಲಾಗಿದೆ.
Comments
English summary
Dakshina Kannada Communal Riot: Prohibitory orders under section 144 of CRPC has been extended to July 25th only in Bantwal talluk of and 3 taluk’s of the district namely Belthangady, Puttur, Sullia are exempted from section.
Story first published: Friday, July 21, 2017, 18:36 [IST]