ದಕ್ಷಿಣ ಕನ್ನಡದಲ್ಲಿ ಲೆ ಸುರೇಶ್ ಶೆಟ್ಟಿಗೆ ಸ್ವಾತಂತ್ರ್ಯ ದಿನದ ಗೌರವ
ಮಂಗಳೂರು, ಆಗಸ್ಟ್ 14: 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರ ಬುಧವಾರದಂದು ಇಲ್ಲಿನ ಪುರಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.
ಮಧ್ಯಾಹ್ನ 3ಕ್ಕೆ ಪೊಲೀಸ್ ಬ್ಯಾಂಡ್
ಮಧ್ಯಾಹ್ನ 3.15ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯೋತ್ಸವ ಸಂದೇಶ-ಕವಿಗೋಷ್ಠಿ-ಗೌರವ ಪ್ರದಾನ- ಸಾಂಸ್ಕೃತಿಕ ಕಾರ್ಯಕ್ರಮ
ಉದ್ಘಾಟಕರು- ಎಚ್.ಪಿ.ರವೀಂದ್ರನಾಥ ಹಂದೆ
ಅಧ್ಯಕ್ಷತೆ- ಎಸ್.ಪ್ರದೀಪ ಕುಮಾರ ಕಲ್ಕೂರ
ಸ್ವಾತಂತ್ರ್ಯೋತ್ಸವ ಗೌರವ- ಸ್ವಾತಂತ್ರ್ಯೋತ್ಸವ ಸಂದೇಶ- ಲೆಫ್ಟಿನೆಂಟ್ ಸುರೇಶ್ ಶೆಟ್ಟಿ
ಸಂಜೆ 4ರಿಂದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಫ್ರೌಢಶಾಲೆ ಮತ್ತು ಕಪಿತಾನಿಯೋ ಪ್ರೌಢಶಾಲೆ ಹಾಗೂ ಗೋವಿಂದ ದಾಸ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 5ರಿಂದ ನೃತ್ಯ ಭಾರತಿ ಬಳಗದಿಂದ ಸಮೂಹ ನೃತ್ಯ, ಗಾನ ಸಂಗೀತ ಸಾಂಸ್ಕೃತಿಕ ವೃಂದದಿಂದ ರಾಷ್ಟ್ರ ಭಕ್ತಿ ಗೀತೆ-ಸಮೂಹ ನೃತ್ಯ- ಗೀತಗಾಯನ