ಕೇಸರಿ ಶಾಲು ಹಾಕಿದಾಕ್ಷಣ ಜನ ಕಾಂಗ್ರೆಸ್ ಅನ್ನು ನಂಬಲ್ಲ: ಆರ್.ಅಶೋಕ್
ಮಂಗಳೂರು, ಏಪ್ರಿಲ್ 06: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಒಂದು ಡ್ರಾಮಾ ಕಂಪನಿ ಇದ್ದಹಾಗೆ . ಕೇಸರಿ ಶಾಲು ಹಾಕಿದ ತಕ್ಷಣ ಜನ ಅವರನ್ನು ನಂಬಲ್ಲ ಎಂದು ಹೇಳಿದರು. ಕೇಸರಿ ಶಾಲಿಗೆ ಅಷ್ಟೆ ಮಹತ್ವವಿದೆ,ಪಾವಿತ್ರ್ಯತೆ ಇದೆ. ತೋರಿಕೆಗೆ ಕೇಸರಿ ಶಾಲು ಹಾಕುವವರನ್ನು ಜನ ನಂಬಲ್ಲ ಎಂದು ಹೇಳಿದರು.
ಇನ್ನು ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಬಿಜೆಪಿ ಮುಖಂಡರು ಭಾಗವಹಿಸುತ್ತಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತೇಜಸ್ವಿ ಸೂರ್ಯ ಅವರ ಪ್ರಚಾರದ ಉದ್ಘಾಟನೆ ಮಾಡಿದ್ದೇ ನಾನು. ಬಿಜೆಪಿ ಅಭ್ಯರ್ಥಿ ಪರ ನಾವು ಕಾಯ-ವಾಚ-ಮನಸ್ಸು ಕೆಲಸ ಮಾಡುತ್ತೇವೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ದೊಡ್ಡ ಅಂತರದಲ್ಲಿ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Comments
r ashok hindu campaign congress bjp lok sabha elections 2019 ಆರ್ ಅಶೋಕ್ ಹಿಂದೂ ಪ್ರಚಾರ ಕಾಂಗ್ರೆಸ್ ಬಿಜೆಪಿ ಲೋಕಸಭಾ ಚುನಾವಣೆ 2019
English summary
speaking to media persons in Mangaluru Former DCM R Ashok slammed congress candidate for using saffron shal for election campaign. He said congress is drama company. People will not believe that.
Story first published: Saturday, April 6, 2019, 18:20 [IST]