ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುನಾಡಿನ ಮೊದಲ ಕಂಬಳದಲ್ಲಿ ಅಂಬರೀಶ್ ಗೆ ಶ್ರದ್ಧಾಂಜಲಿ

|
Google Oneindia Kannada News

ಮಂಗಳೂರು, ನವೆಂಬರ್. 26: ಸ್ಯಾಂಡಲ್ ವುಡ್ ನ ಹಿರಿಯ ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಕರಾವಳಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಕರಾವಳಿಯಲ್ಲಿ ಆರಂಭವಾದ ಮೊದಲ ಕಂಬಳದಲ್ಲಿ ಅಗಲಿದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?

ತುಳುನಾಡಿನಲ್ಲಿ ಕಂಬಳದ ಋತು ಆರಂಭವಾಗಿದೆ. ಈ ವರ್ಷದ ಮೊದಲ ಕಂಬಳ ಬಂಟ್ವಾಳದ 'ಕಕ್ಯಪದವಿನ ಸತ್ಯ ಧರ್ಮ ಜೋಡುಕರೆ'ಗೆ ಚಾಲನೆ ದೊರೆತಿದೆ. ಈ ಸಂದರ್ಭದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಿಸಿ ಶ್ರದ್ಧಾಂಜಲಿ ಕೋರಲಾಯಿತು.

 Live Updates ಅಗಲಿದ ಅಂಬಿಗೆ ವಿದಾಯ ಹೇಳುವ ಹೊತ್ತು Live Updates ಅಗಲಿದ ಅಂಬಿಗೆ ವಿದಾಯ ಹೇಳುವ ಹೊತ್ತು

ಮೈರ ಬರ್ಕೆಜಾಲು ಎಂಬಲ್ಲಿ ನಡೆಯುವ 6ನೇ ವರ್ಷದ ಸತ್ಯ-ಧರ್ಮ ಜೋಡುಕೆರೆ ಕಂಬಳಕ್ಕೆ ಕಂಬಳದ ಗೌರವಾಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಇವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸಹಕಾರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆದ ಕಂಬಳವನ್ನು ಸುಂದರ ಪೂಜಾರಿ ಕೊರೆಂಜಿಕೊಡಿ ಉದ್ಘಾಟಿಸಿದರು.

 ಅಂಬರೀಶ್ ಪಾರ್ಥಿವ ಶರೀರ ಮೆರವಣಿಗೆಗೆ ಬಂದೋಬಸ್ತ್: ಇಲ್ಲಿದೆ ಮಾಹಿತಿ ಅಂಬರೀಶ್ ಪಾರ್ಥಿವ ಶರೀರ ಮೆರವಣಿಗೆಗೆ ಬಂದೋಬಸ್ತ್: ಇಲ್ಲಿದೆ ಮಾಹಿತಿ

Condolence to Ambarish in Kambala

ಕಕ್ಯಪದವಿನ ಸತ್ಯ ಧರ್ಮ ಕಂಬಳವನ್ನು ಬೆತ್ತ ಹಿಡಿಯದೆ ವಿಶಿಷ್ಟವಾಗಿ ನಡೆಸಲಾಯಿತು. ಕಂಬಳ ಸಂಘಟಕರ ಈ ನಿರ್ಧಾರ ಅತ್ಯಂತ ವಿಶೇಷವಾಗಿದ್ದು, ಇದು ಕಂಬಳದ ಇತಿಹಾಸದಲ್ಲೇ ಪ್ರಪ್ರಥಮ ಪ್ರಯೋಗವಾಗಿದೆ. ಪ್ರಥಮ ಪ್ರಯೋಗದಲ್ಲೇ ಸಂಘಟಕರು ಯಶಸ್ವಿಯಾಗಿದ್ದು, ಕಂಬಳಾಭಿಮಾನಿಗಳ ಮನ್ನಣೆಗೆ ಪಾತ್ರವಾಯಿತು.

English summary
Sandalwood actor, politician MH Ambarish passed away. Condolence expressed in Kakyapadavu Kambala at Bantwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X