ಮಂಗಳೂರು : ಕ್ರಿಶ್ಚಿಯನ್ನರ ಅವಹೇಳನ, ದೂರು ದಾಖಲು
ಮಂಗಳೂರು, ಮಾ.3 : ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ ಬಗ್ಗೆ ಪ್ರಕರಣದ ದಾಖಲಾಗಿದೆ. ಆರೋಪಿ ಬೆಂಗಳೂರಿನಲ್ಲಿರುವುದರಿಂದ ಪ್ರಕರಣ ಬೆಂಗಳೂರಿಗೆ ವರ್ಗಾವಣೆಯಾಗಲಿದೆ.
ಶ್ರೀರಾಮ್
ಯಡಪಡಿತ್ತಾಯ
ಎಂಬುವವರು
ಕ್ರಿಶ್ಚಿಯನ್
ಧರ್ಮ
ಮತ್ತು
ಯೇಸು
ಕ್ರಿಸ್ತರ
ಬಗ್ಗೆ
ಅವಹೇಳನಕಾರಿ
ಪೋಸ್ಟ್ಗಳನ್ನು
ಫೇಸ್ಬುಕ್ನಲ್ಲಿ
ಪ್ರಕಟಿಸಿದ್ದರು.
ಮಂಗಳೂರು
ಡಯಾಸಿಸ್ನ
ಸಾರ್ವಜನಿಕ
ಸಂಪರ್ಕಾಧಿಕಾರಿ
ವಿಲಿಯಂ
ಮಿನೇಜಸ್,
ಫಾ.ಜೆ.ಬಿ.ಕ್ರಾಸ್ತಾ
ಮುಂತಾದವರು
ಪೊಲೀಸ್
ಆಯುಕ್ತರಿಗೆ
ದೂರು
ನೀಡಿದ್ದರು.
ಆದರೆ, ಆರೋಪಿ ಶ್ರೀರಾಮ್ ಬೆಂಗಳೂರಿನಲ್ಲಿರುವುದರಿಂದ ಪ್ರಕರಣವನ್ನು ಬೆಂಗಳೂರಿನ ಸೈಬರ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. [ಮಂಗಳೂರು : ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ]
ಅಸಭ್ಯವ ವರ್ತನೆ ವ್ಯಕ್ತಿಗೆ ಥಳಿತ : ಮಂಗಳೂರಿನ ಕೊಡಿಯಾಲ್ಬೈಲ್ ಪತ್ತುಮುಡಿ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ ಜನರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಬೆಳಗಾವಿ ಜಿಲ್ಲೆಯ ಮಹಾಂತೇಶ್ (45) ಎಂದು ಗುರುತಿಸಲಾಗಿದೆ. ಈತ ಪಾಂಡೇಶ್ವರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತ ಈ ಹಿಂದೆಯೂ ಇದೇ ರೀತಿಯಲ್ಲಿ ವರ್ತಿಸಿದ್ದನ್ನು ಗಮನಿಸಿದ್ದ ಸ್ಥಳೀಯರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.