ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಬಡಮಕ್ಕಳಿಗೆ ಪುಸ್ತಕ ವಿತರಣೆ

By Ashwath
|
Google Oneindia Kannada News

ಮಂಗಳೂರು, ಮೇ. 22: ನಗರದ ಸ್ವಯಂ ಸೇವಾ ಸಂಸ್ಥೆ ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೀಡಿದ ಪುಸ್ತಕಗಳನ್ನು ರೊಸಾರಿಯೋ ಚರ್ಚ್‌ನಲ್ಲಿ ವಿತರಿಸಲಾಯಿತು.

ಮಂಗಳೂರು ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಫ್ರಾನ್ಸಿಸ್‌ ಕುಟಿನ್ಹೊ ಪುಸ್ತಕಗಳನ್ನು ವಿತರಿಸಿ ಮಾತನಾಡಿ " ಲಕ್ಷಾಂತರ ಬಡ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಅಂಥವರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಕ್ರಿಸ್ಟೋಫರ್‌ ಅಸೋಸಿಯೇಶನ್‌ ಕಾರ್ಯ ಶ್ಲಾಘನೀಯವೆನಿಸಿದೆ" ಎಂದರು.[ಮಂಗಳೂರು ವಿವಿ ಆವರಣದಲ್ಲಿ 'ಜೋಡಿ' ಶವ]

Mangalore book donate
ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನ ಪ್ರಧಾನ ಧರ್ಮ ಗುರು ಫಾ| ಜೆ.ಬಿ. ಕ್ರಾಸ್ತಾ ಮಾತನಾಡಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಯಾವಗಲೂ ಸಹಕರಿಸುತ್ತದೆ. ದೇವರ ದಯೆಯಿಂದ ಲಭಿಸಿದ ಸಂಪತ್ತನ್ನು ಈ ರೀತಿ ವಿನಿಯೋಗಿಸುವುದರ ಮೂಲಕ ದೇವರ ಸೇವೆ ಮಾಡಿದ ಪುಣ್ಯ ನಮಗೆ ಸಿಗುತ್ತದೆ ಎಂದರು.

ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ 1967ರಲ್ಲಿ ಆರಂಭಗೊಂಡಿದ್ದು ಪ್ರತಿವರ್ಷ ಶಾಲೆ ಆರಂಭಗೊಳ್ಳುವ ಮುನ್ನಾ ಬಡ ವಿದ್ಯಾರ್ಥಿ‌ಗಳಿಗೆ ಪುಸ್ತಕವನ್ನು ನಿರಂತರವಾಗಿ ವಿತರಿಸುತ್ತಿದೆ.

ಸಂಘದ ಅಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
St. Christopher Association which started for the welfare of drivers and vehicle owners by the initative of late bishop Basil Dsouza and late Fr. Fred V Pereira in 1967 with a forunder members children every year. This year it distributed the books with Presidentship of Raymond D'Cunha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X