ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿಯ ಮೇಲೆ ದೈವದ ನರ್ತನ:ಹುಲಿಕಲ್ ನಟರಾಜ್ ಗೆ ಸವಾಲು

|
Google Oneindia Kannada News

ಮಂಗಳೂರು, ಜನವರಿ 20: ಪರಶುರಾಮ ಸೃಷ್ಟಿಯ ತುಳು ನಾಡು ವೈವಿಧ್ಯಮಯ ಕಲೆಗಳ ನೆಲೆ ಬೀಡು. ದೈವಾರಾಧನೆ, ನಾಗಾರಾಧನೆ ಮುಖಾಂತರ ಪ್ರಕೃತಿಯನ್ನು ಆರಾಧಿಸಿಕೊಂಡು ಬಂದವರು ತುಳು ನಾಡಿನ ಜನರು. ಅಂತಹ ತುಳುನಾಡು ವಿಶೇಷ ಭೂತಾರಾಧನೆಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುತ್ತಲೇ ಇದೆ.

ಈ ತುಳುನಾಡಿನ ಪ್ರತಿ ಕುಟುಂಬವೂ ಒಂದಲ್ಲ ಒಂದು ದೈವಗಳನ್ನು ನಂಬಿಕೊಂಡು ಬರುತ್ತಿರುವುದು ಹಿಂದಿನಿಂದಲೂ ಬಂದ ಸಂಪ್ರದಾಯ. 400ಕ್ಕೂ ಮಿಕ್ಕಿದ ವಿವಿಧ ಪ್ರಕಾರಗಳ ಭೂತಗಳ ಆರಾಧನೆಯನ್ನು ತುಳುವರು ನಡೆಸಿಕೊಂಡು ಬರುತ್ತಿದ್ದಾರೆ.

ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರುಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು

ಇಂತಹುದೇ ವಿಶೇಷ ಭೂತಾರಾಧನೆ ಪುತ್ತೂರಿನಲ್ಲಿ ನಡೆಯುತ್ತದೆ. ಪುತ್ತೂರಿನ ಸಂಪ್ಯದಲ್ಲಿ ತುಳುನಾಡಿನ ಭೂತಾರಾಧನೆಯ ಅಂಗವಾದ ಮೂಕಾಂಬಿಕಾ ಗುಳಿಗ ದೈವದ ನರ್ತನ ಇತ್ತೀಚೆಗೆ ನಡೆಯಿತು. ಬೆಂಕಿಯಲ್ಲೇ ಕುಳಿತು ಮಲಗುವ ಈ ದೈವಗಳ ನರ್ತನ ನೋಡುಗರಲ್ಲಿ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿತ್ತು.

Challenged to Hulikal Nataraj on social networking sites

ಅವೇಶ ಬಂದ ದೈವ ಬೆಂಕಿಯನ್ನು ಬಿಡದೆ, ದೈವದ ಸಹಾಯಕರು ಎಷ್ಟು ಎಳೆದರೂ ಪಟ್ಟು ಬಿಡದೆ ಬೆಂಕಿಯಲ್ಲಿ ಚೆಲ್ಲಾಡಿ ಬೆಂಕಿಯನ್ನೇ ಆಲಿಂಗಿಸುವ ಈ ದೈವಗಳು ತುಳುನಾಡಿನ ವಿಶೇಷ ದೈವಾರಾಧನೆಗಳ ಪೈಕಿ ಒಂದಾಗಿದೆ.

ಪವಾಡಗಳನ್ನು ಬಯಲು ಮಾಡುವ ಹುಲಿಕಲ್ ನಟರಾಜ್ ಗೆ ಈ ದೈವಗಳು ಬೆಂಕಿಯ ಮೇಲೆ ನಡೆಸುವ ನರ್ತನವನ್ನು ಸವಾಲಾಗಿಯೂ ಸ್ವೀಕರಿಸುವಂತೆಯೂ ಕೆಲವರು ದೈವದ ನರ್ತನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

English summary
Daiva dance on fire: Challenged to Hulikal Nataraj on social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X